Belagavi NewsBelgaum NewsKannada NewsKarnataka NewsLatest

*ಆತ್ಮಾವಲೋಕನಕ್ಕೆ ಭಗವದ್ಗೀತೆಗಿಂತ ಕನ್ನಡಿ ಬೇರೊಂದಿಲ್ಲ: ಸೂರ್ಯನಾರಾಯಣ ಭಟ್*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಭಗವದ್ಗೀತೆ ಅನುಷ್ಠಾನ ಮಾಡುವಂತದ್ದು, ಕೇವಲ ಭೋಧಿಸುವುದಲ್ಲ. ಆತ್ಮಾವಲೋಕನಕ್ಕೆ ಗೀತೆಗಿಂತ ಕನ್ನಡಿ ಬೇರೊಂದಿಲ್ಲ ಎಂದು ವಿದ್ವಾನ್ ಸೂರ್ಯನಾರಾಯಣ ಭಟ್ ಹೇಳಿದ್ದಾರೆ.

Home add -Advt

ಬೆಳಗಾವಿಯ ಗೀತಗಂಗಾ ಕಟ್ಟಡದಲ್ಲಿ ಶುಕ್ರವಾರ ಗೀತಾ ಜಯಂತಿ ಹಿನ್ನೆಲೆಯಯಲ್ಲಿ ಸಂಘಟಿಸಲಾಗಿದ್ದ ಸಮಗ್ರ ಗೀತಾ ಪಠಣ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ನಾವು ಇರುವ ಗುಣದಿಂದ ಸತ್ವಗುಣಕ್ಕೆ ಏರಬೇಕು. ಆ ದಿಸೆಯಲ್ಲಿ ನಿರಂತರ ಪ್ರಯತ್ನ ಬೇಕು ಎಂದು ಅವರು ಹೇಳಿದರು.


ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ವತಿಯಿಂದ ಭಗವದ್ಗೀತೆ ಅಭಿಯಾನದ ಅಂಗವಾಗಿ ಬೆಳಗಾವಿಯ ಚಿದಂಬರ ನಗರ ಮತ್ತು ಗೀತಗಂಗಾ ಕಟ್ಟಡದಲ್ಲಿ ಶುಕ್ರವಾರ ಸಮಗ್ರ ಗೀತಾ ಪಠಣ ಆಯೋಜಿಸಲಾಗಿತ್ತು. 300ಕ್ಕೂ ಹೆಚ್ಚು ಮಹಿಳೆಯರು 4 ಗಂಟೆಗಳ ಕಾಲ ಸತತವಾಗಿ ಗೀತಾ ಪಠಣ ಮಾಡಿದರು.


ವಿದ್ವಾನ್ ಅರುಣ ಹೆಗಡೆ, ಖ್ಯಾತ ಗಾಯಕಿ ರಾಧಾ ದೇಸಾಯಿ, ಭಗವದ್ಗೀತೆ ಅಭಿಯಾನ ಸಮಿತಿ ಕಾರ್ಯಾಧ್ಯಕ್ಷ ಪರಮೇಶ್ವರ ಹೆಗಡೆ ಮೊದಲಾದವರಿದ್ದರು.

Related Articles

Back to top button