National

*ಆಟವಾಡುತ್ತಿದ್ದಾಗಲೇ ಹೃದಯಾಘಾತ: ವಿದ್ಯಾರ್ಥಿ ಸಾವು*

ಪ್ರಗತಿವಾಹಿನಿ ಸುದ್ದಿ: ಸಿಎಂ ಕಪ್ ವಾಲಿಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಯೊಬ್ಬ ಮೈದಾನದಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ತೆಲಂಗಾಣದ ವನಪರ್ತಿಯಲ್ಲಿ ನಡೆದಿದೆ.

15 ವರ್ಷದ ಸಾಯಿ ಪುನೀತ್ ಮೃತ ವಿದ್ಯಾರ್ಥಿ. ಪಾಮಿರೆಡ್ಡಿಪಲ್ಲಿ ಮಂದಿರದ ತಾಂಡಾದ 10ನೇ ತರಗತಿ ವಿದ್ಯಾರ್ಥಿ. ಪಂದ್ಯದ ವೇಳೆ ಏಕಾಏಕಿ ಬಾಲಕ ಕುಸಿದು ಬಿದ್ದಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

Home add -Advt

ಆದರೆ ವೈದ್ಯರು ಅಷ್ಟರಲ್ಲೇ ಬಾಲಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾಗಿ ತಿಳಿಸಿದ್ದಾರೆ. ಮೃತ ಬಾಲಕನ ಕುಟುಂಬಕ್ಕೆ ನೆರವು ನೀಡುವಂತೆ ಒತ್ತಾಯಿಸಿ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

Related Articles

Back to top button