Belagavi NewsBelgaum NewsKarnataka News
*ಅಂಗಡಿ ಹಾಕುವ ವಿಚಾರಕ್ಕೆ ಜಗಳ: ವ್ಯಾಪಾರಿಯ ಮೂಗು ಕತ್ತರಿಸಿದ ಮತ್ತೋರ್ವ ವ್ಯಾಪಾರಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಖಡೇ ಬಜಾರ್ನ ಖಂಜರ್ ಗಲ್ಲಿಯಲ್ಲಿ ಫುಟ್ಪಾತ್ನಲ್ಲಿ ಅಂಗಡಿ ಹಾಕುವ ವಿಚಾರವಾಗಿ ಉಂಟಾದ ಗಲಾಟೆ ಹಿಂಸಾಚಾರಕ್ಕೆ ತಿರುಗಿದ್ದು, ವ್ಯಾಪಾರಿಯೊಬ್ಬ ಇನ್ನೋರ್ವ ವ್ಯಾಪಾರಿಯ ಮೂಗು ಕತ್ತರಿಸಿದ ಘಟನೆ ನಡೆದಿದೆ.
ಸಂತ್ರಸ್ತ ಸುಫಿಯಾನ್ ಪಠಾಣ್ (42) ತನ್ನ ಅಂಗಡಿಯನ್ನು ಸ್ಥಾಪಿಸಲು ಯತ್ನಿಸುತ್ತಿದ್ದಾಗ, ಮತ್ತೊಬ್ಬ ವ್ಯಾಪಾರಿ ಆಯಾನ್ ದೇಸಾಯಿ ಎಂಬಾತನೊಂದಿಗೆ ವಾಗ್ವಾದ ನಡೆದಿದೆ. ಈ ವೇಳೆ, ದೇಸಾಯಿ ಚಾಕು ತೆಗೆದು ಸುಫಿಯಾನ್ನ ಮೂಗನ್ನು ಕತ್ತರಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಘರ್ಷಣೆಯಲ್ಲಿ ಮತ್ತೊಬ್ಬ ವ್ಯಕ್ತಿ ಸಮೀರ್ ಪಠಾಣ್ ಕೂಡ ಗಾಯಗೊಂಡಿದ್ದಾನೆ. ಸುಫಿಯಾನ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.