
ಪ್ರಗತಿವಾಹಿನಿ ಸುದ್ದಿ: ತಿರುಪತಿ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬು ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮೂಲದ ಕೆಮಿಕಲ್ ಉದ್ಯಮಿಯೊಬ್ಬರನ್ನು ಎಸ್ ಐಟಿ ಬಂಧಿಸ್ದೆ.
ದೆಹಲಿ ಮೂಲದ ರಾಸಾಯನಿಕ ಉದ್ಯಮಿ ಅಜಯ್ ಕುಮಾರ್ ಸುಗಂಧ ಬಂಧಿತ ಆರೋಪಿ. ತಿರುಪತಿ ಲಡ್ಡುವಿಗೆ ತುಪ್ಪದ ಬದಲಾಗಿ ನಕಲಿ ತುಪ್ಪ ತಯಾರಿಕೆಗೆ ರಾಸಾಯನಿಕಗಳನ್ನು ಪೂರೈಸಿದ್ದ ಕಾರಣಕ್ಕೆ ಅಜಯ್ ಕುಮಾರ್ ಬಂಧನವಾಗಿದೆ.
ತಿರುಪತಿ ಲಡ್ಡುಗೆ ಕಲಬೆರಿಕೆ ಬೆರೆಸಿದ ಪ್ರಕರಣದಲ್ಲಿ ಅಜಯ್ ಕುಮಾರ್ 16ನೇ ಆರೋಪಿಯಾಗಿದ್ದು, ಎಸ್ ಐಟಿ ತನಿಖಾ ತಂಡ ಬಂಧಿಸಿದೆ. ಅಜಯ್ ಕುಮಾರ್ ಬೊಲೆಬಾಬಾ ಡೈರಿ ನಿರ್ದೇಶಕರಾದ ಪೋಮಿಲ್ ಜೈನ್ ಹಾಗೂ ವಿಪಿನ್ ಜೈನ್ ಅವರೊಂದಿಗೆ ಹಲವಾರು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ.


