Kannada NewsKarnataka News

​ಹೆಬ್ಬಾಳಕರ್ ಮಾರ್ಗದರ್ಶನದಲ್ಲಿ ಅವಿರೋಧ ಆಯ್ಕೆ : ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸನ್ಮಾನ​

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ  ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ಮಾರ್ಗದರ್ಶನದಂತೆ ಅವಿರೋಧವಾಗಿ ಆಯ್ಕೆಯಾಗಿರುವ ​ಸುಳೇಬಾವಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷರನ್ನು ಕಾಂಗ್ರೆಸ್ ಮುಖಂಡ, ಲಕ್ಷ್ಮಿ ತಾಯಿ ಸೌಹಾರ್ದ ಸಹಕಾರಿ ಸಂಘದ ಚೇರಮನ್ ಚನ್ನರಾಜ ಹಟ್ಟಿಹೊಳಿ ಬುಧವಾರ ಸತ್ಕರಿಸಿದರು.
  ಸುಳೇಭಾವಿ ಗ್ರಾಮಕ್ಕೆ ತೆರಳಿದ ಹಟ್ಟಿಹೊಳಿ,  ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಗೊಂಡ ಮಹೇಶ ಸುಗ್ನನೆಣ್ಣವರ ಹಾಗೂ ಉಪಾಧ್ಯಕ್ಷರಾಗಿ ಆಯ್ಕಯಾಗಿರುವ ರತ್ನವ್ವ ಕೋಲಕಾರ ಅವರನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಸನ್ಮಾನಿಸಿದರು. ಜೊತೆಗೆ ಗ್ರಾಮದ ಸಮಗ್ರ ಅಭಿವೃದ್ಧಿಯ ಕುರಿತು ಚರ್ಚಿಸಿದರು.
​​
ಕ್ಷೇತ್ರದಲ್ಲಿ ಯಾವುದೇ​ ರೀತಿಯ​ ತಾರತಮ್ಯವಿಲ್ಲದೆ ಎಲ್ಲ ​ರೀತಿಯ ಅಭಿವೃದ್ಧಿ ಕೆಲಸಗಳು ನಿರಂತರ​ವಾಗಿ​ ​ನಡೆಯುತ್ತಿವೆ. ಸುಳೇಭಾವಿ​ ಗ್ರಾಮದ​ ಸಮಗ್ರ ಅಭಿವೃದ್ಧಿ​ಗೆ ಕೂಡ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಎಲ್ಲ​ ರೀತಿಯ​​ ​ನೆರವು ನೀಡಲಿದ್ದಾರೆ. ಅವರ ಸಹಕಾರದೊದಿಗೆ ಗ್ರಾಮವನ್ನು ಮಾದರಿಯಾಗಿ ಅಭಿವೃದ್ಧಿಪಡಿಸೋಣ ಎಂದು ಚನ್ನರಾಜ ಹಟ್ಟಿಹೊಳಿ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸಲಹೆ ನೀಡಿದರು.
ಈ‌ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಗಂಗಣ್ಣ ಕಲ್ಲೂರ, ಎಲ್. ಎನ್. ಕಲ್ಲೂರ, ದತ್ತಾ ಬಂಡಿಗನಿ, ಇಸ್ಮಾಯಿಲ್ ತಿಗಡಿ, ಬಸನಗೌಡ ಪಾಟೀಲ, ಇಸಾಕ್ ಜಮಾದಾರ  ಮುಂತಾದವರು ಉಪಸ್ಥಿತರಿದ್ದರು​.​

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button