Latest

ಪಂಚಮಸಾಲಿ ಪರಾಕ್ರಮ; ಬ್ಯಾರಿಕೇಡ್ ಗಳನ್ನು ಕಿತ್ತೆಸೆದು ವಿಧಾನಸೌಧದತ್ತ ಮುನ್ನುಗ್ಗಿದ ಹೋರಾಟಗಾರರು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ ಉಗ್ರಸ್ವರೂಪ ಪಡೆದುಕೊಂಡಿದ್ದು, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿ ಹೋರಾಟಗಾರರು ಪಾದಯಾತ್ರೆ ಮುಂದುವರೆಸಿದ್ದಾರೆ.

ಅರಮನೆ ಮೈದಾನದಲ್ಲಿ ನಡೆದ ಸಮಾವೇಶ ಮುಗಿಯುವುದರೊಳಗಾಗಿ ಮೀಸಲಾತಿ ಘೋಷಿಸುವಂತೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ಗಡುವು ನೀಡಿದ್ದರು. ಆದರೆ ಸರ್ಕಾರ ಮೀಸಲಾತಿ ಬಗ್ಗೆ ಘೋಷಿಸದ ಹಿನ್ನೆಲೆಯಲ್ಲಿ ಸ್ವಾಮೀಜಿಗಳ ನೇತೃತ್ವದಲ್ಲಿ ಪಂಚಮಸಾಲಿ ಹೋರಾಟಗಾರರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೋರಟಿದ್ದಾರೆ.

Home add -Advt

ಹೋರಾಟಗಾರರನ್ನು ಕಾವೇರಿ ಜಂಕ್ಷನ್ ಬಳಿಯೇ ಪೊಲೀಸರು ತಡೆದಿದ್ದು, ಪಾದಯಾತ್ರೆ ಕೈಬಿಡುವಂತೆ ಮನವಿ ಮಾಡಿದ್ದಾರೆ. ಆದರೂ ಬಗ್ಗದ ಹೋರಾಟಗಾರರು ಪರ್ಯಾಯ ಮಾರ್ಗವಾಗಿ ಮುನ್ನುಗ್ಗಲು ಯತ್ನಿಸಿದ್ದಾರೆ. ಈವೇಳೆ ರಸ್ತೆಗೆ ಬ್ಯಾರಿಕೇಡ್ ಗಳನ್ನು ಹಾಕಿ ಪಾದಯಾತ್ರೆಗೆ ತಡೆಯೊಡ್ಡಿದ್ದಾರೆ. ಪೊಲೀಸರು ಹಾಗೂ ಪಂಚಮಸಾಲಿ ಸಮುದಾಯದ ಮುಖಂಡರ ನಡುವೆ ಮಾತಿನಚಕಮಕಿ ನಡೆದಿದ್ದು, ಬ್ಯಾರಿಕೇಡ್ ಗಳನ್ನು ಕಿತ್ತೆಸೆದು ವಿಧಾನಸೌಧದತ್ತ ಮುನ್ನುಗ್ಗಲು ಹೋರಾಟಗಾರರು ಯತ್ನಿಸಿದ್ದಾರೆ.

https://pragati.taskdun.com/latest/panchamasalireservationmla-lakshmi-hebbalkar/

Related Articles

Back to top button