Kannada NewsLatest

ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಪರ ಡಾ.ಪ್ರಭಾಕರ ಕೋರೆ ಬಿರುಸಿನ ಪ್ರಚಾರ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿಧಾನಪರಿಷತ್ ಚುನಾವಣೆ ಅಖಾಡ ರಂಗೇರಿದ್ದು, ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಪರವಾಗಿ ಕೆ ಎಲ್ ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಬಿರುಸಿನ ಪ್ರಚಾರ ನಡೆಸಿದರು.

ಪಂಚಾಯತ್‌ ರಾಜ್ಯಕ್ಕೆ ಬಹುಮೌಲಿಕ ಕೊಡುಗೆ ನೀಡಿರುವ ಮಹಾಂತೇಶ ಕವಟಗಿಮಠ ಯುವಉತ್ಸಾಹಿ ನಾಯಕರಾಗಿ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ರೈತರ ಗಟ್ಟಿ ಧ್ವನಿಯಾಗಿರುವ ಅವರಿಗೆ ಮೊದಲ ಪ್ರಾಶಸ್ತ್ಯ ನೀಡಿ, ಅಮೂಲ್ಯ ಮತವನ್ನು ನೀಡಿ ಬಹುಮತದಿಂದ ಆಯ್ಕೆಮಾಡಬೇಕು ಎಂದು ಪ್ರಭಾಕರ ಕೋರೆ ಕರೆ ನೀಡಿದರು.

ಬಾಗತಾಲೂಕಿನ ಬಾವನ ಸವದತ್ತಿ, ನಸಲಾಪೂರ, ನಂದಿಕುರ್ಲಿ,ಕೆಪಟ್ಟಿ, ಜಲಾಲಪೂರ, ದಿಗ್ಗೇವಾಡಿ ಗ್ರಾಮ ಪಂಚಾಯತಗಳಿಗೆ ಭೇಟಿ ನೀಡಿ ಕೋರೆ ಮತಯಾಚಿಸಿದರು. ಮಹಾಂತೇಶ ಕವಟಗಿಮಠ ದಣಿವರಿಯದ ದುಡಿಮೆಗಾರ, ಅವರ ಕುಟುಂಬ ಈ ಭಾಗದಲ್ಲಿ ಅನೇಕ ಸಾಮಾಜಿಕ ಕೆಲಸ ಕಾರ್ಯಗಳನ್ನು ಬದ್ಧತೆಯಿಂದ ಮಾಡಿದೆ. ರೈತರ ಬದುಕಿನ ಆಶಾಕಿರಣವಾಗಿರುವ ಅವರು ಸದನದ ಒಳಹೊರಗೆ ಸಮಸ್ಯೆಗಳನ್ನು ಬೆಳಕಿಗೆ ತಂದುಚರ್ಚಿಸಿದ್ದಾರೆ. ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಗ್ರಾಮ ಪಂಚಾಯತಗಳ ಹತ್ತು ಹಲವಾರು ಸಮಸ್ಯೆಗಳನ್ನು ಪರಿಹರಿಸಿದ್ದಾರೆ. ಇಂತಹ ಯುವ ನಾಯಕನಿಗೆ ನಿಮ್ಮ ಮೊದಲ ಪ್ರಾಶಸ್ತ್ಯಯದ ಮತವನ್ನು ನೀಡಿ ಆಯ್ಕೆ ಮಾಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರಾಯಬಾಗ ಶಾಸಕರಾದ ದುರ್ಯೋಧನ ಐಹೊಳೆ, ಚಿದಾನಂದ ಕೋರೆ ಸಕ್ಕರೆ ಕಾರಖಾನೆ ಚೇರಮನ್ ಭರತ ಬನವಣೆ, ವೈಸ್‌ಚೇರಮನ್ ಮಲ್ಲಿಕಾರ್ಜುನ ಕೋರೆ, ತಾತ್ಯಾಸಾಬ ಕಾಟೆ, ಮಲ್ಲಪ್ಪಾ ಮಹಿಷಾಳೆ, ರಾಮಚಂದ್ರ ನಿಶಾನದಾರ, ಮಹೇಶ ಬಾತೆ, ಅಮಿತಜಾಧವ್, ಶಿವೂ ನಾಯಕ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಬಹುಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಗೆಲ್ಲಿಸಿ: ಸಚಿವೆ ಶಶಿಕಲಾ ಜೊಲ್ಲೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button