Latest

ಒಂದೇ ಕುಟುಂಬದ ಮೂವರು ಸಮುದ್ರಪಾಲು; ಇಬ್ಬರ ಸಾವು; ಬಾಲಕಿ ನಾಪತ್ತೆ

ಪ್ರಗತಿವಾಹಿನಿ ಸುದ್ದಿ, ಮುಘಸೈಲ್: ಓಮನ್ ನ ಮುಘಸೈಲ್  ಕಡಲ ತೀರದಲ್ಲಿ ವಿಹರಿಸಲು ಹೋಗಿದ್ದ ಮಹಾರಾಷ್ಟ್ರ ಮೂಲದ  ಭಾರತೀಯ ಕುಟುಂಬದ 3 ಜನ ನೀರಿನ ಸೆಳೆತಕ್ಕೆ ಕೊಚ್ಚಿಹೋಗಿದ್ದು ಈ ಪೈಕಿ ಇಬ್ಬರು ಮೃತಪಟ್ಟಿದ್ದು  ಬಾಲಕಿ ನಾಪತ್ತೆಯಾಗಿದ್ದಾಳೆ.

ಶಶಿಕಾಂತ ಮಹಾಮನೆ (42) ಅವರ ಆತನ  ಶ್ರೇಯಸ್ (6) ಶವವನ್ನು ಹೊರತೆಗೆಯಲಾಗಿದ್ದು   ಮಗಳು ಶೃತಿ (9) ನಾಪತ್ತೆಯಾಗಿದ್ದಾಳೆ.  ಇವರು ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವೇಳೆ ಇತರ ಕೆಲ ಪ್ರವಾಸಿಗರು ಅದನ್ನು ಚಿತ್ರೀಕರಿಸಿದ್ದಾರೆ. 

ಶಶಿಕಾಂತ ಮಹಾಮನೆ, ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ದುಬೈನಲ್ಲಿ ವಾಸಿಸುತ್ತಿದ್ದರು. ಅಲ್ಲಿನ ಕಂಪನಿಯೊಂದರಲ್ಲಿ ಶಶಿಕಾಂತ ಮಾರುಕಟ್ಟೆ ವ್ಯವಸ್ಥಾಪಕರಾಗಿ ಕೆಲಸ ಮಾಡಿಕೊಂಡಿದ್ದರು. ರಜೆ ನಿಮಿತ್ತ ನೆರೆಯ ಓಮನ್ ಗೆ ಟ್ರಿಪ್ ಗಾಗಿ ಹೋದಾಗ ಈ ದುರ್ಘಟನೆ ಸಂಭವಿಸಿದ್ದಾಗಿ ಅವರ ಸಹೋದರ ಹೇಳಿಕೊಂಡಿದ್ದಾರೆ.

ಗಾಂಧೀಜಿ ಪುತ್ಥಳಿ ಧ್ವಂಸ; ವೇದನೆ ವ್ಯಕ್ತಪಡಿಸಿದ ಭಾರತ

Home add -Advt

Related Articles

Back to top button