Kannada NewsLatest

ಪಂಢರಾಪುರ ದರ್ಶನಕ್ಕೆ ತೆರಳುತ್ತಿದ್ದ ಬೆಳಗಾವಿಯ ವಾರಕರಿಗಳ ಕಾರು ಪಲ್ಟಿ; ಹವ್ಯಾಸಿ ಪತ್ರಿಕಾ ಛಾಯಾಗ್ರಾಹಕ ಸಹಿತ ಇಬ್ಬರ ಸಾವು, ಮೂವರಿಗೆ ಗಂಭೀರ ಗಾಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಆಶಾಢ ಏಕಾದಶಿ ನಿಮಿತ್ತ ಬೆಳಗಾವಿಯಿಂದ ಮಹಾರಾಷ್ಟ್ರದ ಶ್ರೀಕ್ಷೇತ್ರಕ್ಕೆ ತೆರಳುತ್ತಿದ್ದ  ವಾರಕರಿಗಳ ಕಾರು ಸೋಲಾಪುರ ಜಿಲ್ಲೆಯ ಸಂಗೋಳ ಬಳಿ ಪಲ್ಟಿಯಾಗಿ ಕಾರಿನಲ್ಲಿದ್ದ ಐವರ ಪೈಕಿ ಹವ್ಯಾಸಿ ಪತ್ರಿಕಾ ಛಾಯಾಗ್ರಾಹಕ ಸಹಿತ  ಇಬ್ಬರು ಮೃತಪಟ್ಟಿದ್ದು, ಮೂವರು ಗಂಭೀರ ಗಾಯಗೊಂಡಿದ್ದಾರೆ.

 

 

Home add -Advt

 

 

 

ಬೆಳಗಾವಿಯ ಹವ್ಯಾಸಿ  ಪತ್ರಿಕಾ ಛಾಯಾಗ್ರಾಹಕ   ರಾಜ್ ಶಿಂದೋಳಕರ (45) ಹಾಗೂ ಪರಶುರಾಮ ಸಂಭಾಜಿ ಚಂಗ್ರುಚೆ (50) ಮೃತಪಟ್ಟವರು. ಗೀತೇಶ ಕೋಕಿತ್ಕರ್(23), ಅಭಿಜಿತ್ ಹುಂದ್ರೆ (28) ಹಾಗೂ ರಾಜು ಕೃಷ್ಣ ಮಜುಕರ (26) ಗಾಯಗೊಂಡಿದ್ದು ಪಂಢರಪುರದ ಲೈಫ್ ಲೈನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಧ್ಯರಾತ್ರಿ ಪಂಢರಪುರ-ಸಂಗೋಳ ರಸ್ತೆಯ ಕಾಸೆಗಾಂವ ಬಳಿ ಟಿಯಾಗೋ ಕಾರು ಪಲ್ಟಿಯಾಗಿ ಈ ಅವಘಡ ಸಂಭವಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಾರ್ ನಲ್ಲಿ ಗುಂಡಿನ ದಾಳಿ; 14 ಜನರು ದುರ್ಮರಣ

Related Articles

Back to top button