Kannada NewsKarnataka News

ಟಿಐಇಯಿಂದ ಸಾಧಕರ ಸತ್ಕಾರ

ಟಿಐಇಯಿಂದ ಸಾಧಕರ ಸತ್ಕಾರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ಹುಬ್ಬಳ್ಳಿ ಇಂಡಸ್ ಉದ್ಯಮಿಗಳು (ಟಿಐಇ) ೨೦೧೮-೧೯ನೇ ಸಾಲಿನಲ್ಲಿ ಪ್ರಶಸ್ತಿಗಳನ್ನು ಪಡೆದಿರುವ ಬೆಳಗಾವಿಯ ತನ್ನ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಕೆಎಲ್‌ಎಸ್ ಐಎಂಇಆರ್ ನಲ್ಲಿ ನಡೆದ ಸಮಾರಂಭದಲ್ಲಿ ಸಾಧಕರನ್ನು ಸತ್ಕರಿಸಲಾಯಿತು. ಯು.ಐ.ಟಿ. ಮ್ಯೂಚುಯಲ್ ಫಂಡ್ ಮತ್ತು ಸಿಎನ್‌ಬಿಸಿ-ಟಿವಿ ೧೮, ೧೦ನೇ ಹಣಕಾಸು ಸಲಹೆಗಾರ ಪ್ರಶಸ್ತಿಯನ್ನು ಬೆಳಗಾವಿಯ ಹಣಕಾಸು ಸಲಹೆಗಾರರಾದ ದತ್ತಾ ಕಣಬರ್ಗಿ ಮತ್ತು ಅನಿತಾ ಕಣಬರ್ಗಿ ಅವರು ಪಡೆದಿದ್ದಾರೆ.
ಎನರ್ಜಿ ಮೈಕ್ರೋವೇವ್ ಸಿಸ್ಟಮ್ಸ್ ಪ್ರೈ.ಲಿ. ನ ಸ್ಥಾಪಕ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರಕಾಶ್ ಮುಗಳಿ ಲಿಮಿಟೆಡ್ (ಇಎಂಎಸ್ಪಿಎಲ್) ೨೦೧೮-೧೯ರ ಅವಧಿಯಲ್ಲಿ ಮೂರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಭಾರತದ “ಉತ್ಪಾದನಾ ವಿಭಾಗದಲ್ಲಿ ಹೆಚ್ಚಿನ ಟೆಕ್ ಸ್ಯಾವಿ ಮೈಕ್ರೋ ಎಂಟರ್‌ಪ್ರೈಸ್, ಟಾಪ್ ಎಸ್‌ಎಂಇ ಇನ್ನೋವೇಶನ್ ಪ್ರಶಸ್ತಿ, ಇಂಡಿಯಾ ಎಸ್‌ಎಂಇ ೧೦೦ ಪ್ರಶಸ್ತಿ ಲಭಸಿದೆ.
ಟಿಇ ಹುಬ್ಬಳ್ಳಿ ಅಧ್ಯಕ್ಷ ಶಶಿಧರ ಶೆಟ್ಟರ್, ಚಾರ್ಟರ ಸದಸ್ಯರಾದ ಡಾ. ಶಂಕರ ಬಿಜಾಪುರ, ವೆಂಕಟೇಶ ಪಾಟೀಲ, ಡಾ. ಶಶಿಕಾಂತ ಕುಲಗೋಡ, ಕಿರಣ ಅಗಡಿ, ಅಮಿತ್ ಕಲಕುಂದ್ರಿ ಅವರು ಸನ್ಮಾನಿಸಿದರು. ಕೆಎಲ್‌ಎಸ್ ಐಎಂಇಆರ್ ಅಧ್ಯಕ್ಷ ರಾಜೇಂದ್ರ ಬೆಳಗಾಂಕರ್ ಸ್ವಾಗತಿಸಿದರು. ಚಾರ್ಟರ್ ಸದಸ್ಯ ಮಹೇಶ ಬಿರಂಗಿ ಅವರು ವಂದಿಸಿದರು.
ಸಚಿನ್ ಕುಲಗೋಡ ಮತ್ತು ಪ್ರವೀಣ ಬಂಗೋಡಿ ಅವರು ಕಾರ್ಯಕ್ರಮವನ್ನು ಸಂಯೋಜಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button