CrimeFilm & EntertainmentKannada NewsKarnataka News
*ನಟಿಗೆ ಗುಪ್ತಾಂಗದ ಫೋಟೋ ಕಳುಹಿಸಿ ಟಾರ್ಚರ್- ಶೆಡ್ ಗೆ ಕರೆಯದೆ ದೂರು ನೀಡಿದ ನಟಿ*

ಪ್ರಗತಿವಾಹಿನಿ ಸುದ್ದಿ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಬೆನ್ನಲ್ಲೇ ಬೆಂಗಳೂರಿನಲ್ಲಿ ಮತ್ತೋರ್ವ ಯುವಕ ಸೀರಿಯಲ್ ನಟಿಗೆ ಗುಪ್ತಾಂಗದ ಫೋಟೋಗಳನ್ನು ಕಳುಹಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದು ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಬಂಧಿಸಲಾಗಿದೆ.
ಕನ್ನಡದ ಕಿರುತೆರೆ ನಟಿಗೆ ವ್ಯಕ್ತಿಯೋರ್ವ ಸೋಶಿಯಲ್ ಮೀಡಿಯಾದಲ್ಲಿ ಗುಪ್ತಾಂಗದ ಫೋಟೋ ಕಳುಹಿಸಿ ಗುಪ್ತಾಂಗದ ವಿಡಿಯೋ ಕಳುಹಿಸಿ ಕಿರುಕುಳ ನಿಡಿದ್ದಾನೆ.
ಆ ವ್ಯಕ್ತಿಯ ಅಕೌಂಟ್ನ ಬ್ಲಾಕ್ ಮಾಡಿದ ಹೊರತಾಗಿಯೂ ಬೇರೆ ಖಾತೆಯಿಂದ ಮೆಸೇಜ್ ಮಾಡಲು ಆರಂಭಿಸಿದ್ದಾನೆ. ಆ ಬಳಿಕ ಸ್ವತಃ ನಟಿ ಆತನಿಗೆ ಬುದ್ಧಿವಾದ ಹೇಳಿದ್ದಳು.
ನವೀನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ವ್ಯಕ್ತಿ ಇವನಾಗಿದ್ದು, ವೈಟ್ಫೀಲ್ಡ್ ಅಲ್ಲಿ ವಾಸವಿದ್ದಾನೆ. ಡಿಲವರಿ ಮ್ಯಾನೆಜರ್ ಆಗಿ ನವೀನ್ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.



