Kannada NewsLatestNational

*ಮದುವೆಯಾದ ಎರಡೇ ದಿನಕ್ಕೆ ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಭುವಿಕ್*

ಪ್ರಗತಿವಾಹಿನಿ ಸುದ್ದಿ: ಗುಜರಾತ್ ನ ಅಹಮದಾಬಾದ್ ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡು ಸಾವನ್ನಪ್ಪಿದವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇತ್ತೀಚಿನ ಮಾಹಿತಿ ಪ್ರಕಾರ ಘಟನೆಯಲ್ಲಿ 274 ಜನರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ದುರಂತದಲ್ಲಿ ಸಾವನ್ನಪ್ಪಿದವರದ್ದು ಒಬ್ಬೊಬ್ಬರದ್ದೂ ಒಂದೊಂದು ಕಥೆ. ಮದುವೆಯಾಗಿ ಎರಡೇ ದಿನದಲ್ಲಿ ವರ ವಿಮಾನ ದುರಂತದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.

ವಡೋದರಾದ ಭವಿಕ್ ಮಹೇಶ್ವರಿ (26) ಮದುವೆಯಾದ ಎರಡೇ ದಿನಕ್ಕೆ ಏರ್ ಇಂಡಿಯಾ ವಿಮಾನ ದುರಂತದಲ್ಲಿ ತಮ್ಮ ಬದುಕನ್ನೇ ಅಂತ್ಯಗೊಳಿಸಿದ್ದಾರೆ. ಕೆಲ ವರ್ಷಗಳಿಂದ ಲಂಡನ್ ನಲ್ಲಿದ್ದ ಭುವಿಕ್ ಮಹೇಶ್ವರಿ ಜೂನ್ 10ರಂದು ಕುಟುಂಬದ ಸೂಚನೆಯಂತೆ ರಿಜಿಸ್ಟರ್ ಮದುವೆಯಾಗಿದ್ದರು. ಮುಂದಿನ ಬಾರಿ ಲಂಡನ್ ನಿಂದ ವಾಪಸ್ ಬಂದಾಗ ಸಂಭ್ರಮಾಚರಣೆ ಮಾಡಲು ನಿರ್ಧರಿಸಿದ್ದರು.

ಪ್ರತಿ ವರ್ಷ ಭುವಿಕ್ 15 ದಿನ ರಜೆ ಹಾಕಿ ಊರಿಗೆ ಬರುತ್ತಿದ್ದರು. ಅದರಂತೆ ಈ ಬಾರಿಯೂ ಊರಿಗೆ ಬಂದಾಗ ಇಬ್ಬರೂ ಮದುವೆಯಾಗಿಯೇ ಲಂಡನ್ ಗೆ ತೆರಳುವಂತೆ ಕುಟುಂಬದವರು ಒತ್ತಾಯಿಸಿದ್ದರು. ಮನೆಯವರ ಒತ್ತಾಯಕ್ಕೆ ಮಣಿದು ಭುವಿಕ್ ಎರಡು ದಿನಗಳ ಹಿಂದಷ್ಟೇ ಕುಟುಂಬದವರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಿದ್ದರು. ಪತ್ನಿಗೆ ವಿಸಾ ರೆಡಿ ಮಾಡಿಸಿ ಲಂಡನ್ ಗೆ ಕರೆದುಕೊಳ್ಳಲು ಸಿದ್ಧತೆ ನಡೆಸಿದ್ದರು. ಅಹಮದಾಬಾದ್ ಏರ್ ಪೋರ್ಟ್ ವರೆಗೂ ಬಂದು ಪತ್ನಿ ಬೀಳ್ಕೊಟ್ಟಿದ್ದರು. ಪತ್ನಿ ಮನೆ ತಲುಪುವ ಮುನ್ನವೇ ಪತಿ ವಿಮಾನ ದುರಂತದಲ್ಲಿ ಸಾವು ಎಂಬ ಸುದ್ದಿ ತಿಳಿದು ಆಘಾತಕ್ಕೊಳಗಾಗಿದ್ದಾರೆ. ನವಜೀವನದ ಕನಸು ಕಂಡಿದ್ದ ಜೋಡಿಯ ಕನಸು ನುಚ್ಚುನೂರಾಗಿದೆ.

Home add -Advt


Related Articles

Back to top button