Kannada NewsKarnataka NewsNational

*ತಂದೆ ಹಾಗೂ ಸಹೋದರನನ್ನು ಕೊಂದು ಪರಾರಿಯಾಗಿದ್ದ ಬಾಲಕಿಯ ಬಂಧನ*

ಪ್ರಗತಿವಾಹಿನಿ ಸುದ್ದಿ: ಪ್ರೀತಿಗಾಗಿ ತನ್ನ ಸ್ವಂತ ತಂದೆ ಮತ್ತು ಒಂಬತ್ತು ವರ್ಷದ ಸಹೋದರನನ್ನು ಕೊಂದು ಶವಗಳನ್ನು ಫ್ರೀಜರ್‌ನಲ್ಲಿ ತುಂಬಿ ಪರಾರಿಯಾಗಿದ್ದ ಬಾಲಕಿಯನ್ನು ಪೊಲೀಸರು ಬಂಧಿಸಿದ್ದಾರೆ. 

10ನೇ ತರಗತಿ ಓದುತಿದ್ದ ಬಾಲಕಿ ತನ್ನ ತಂದೆ ಹಾಗೂ 9 ವರ್ಷದ ಸಹೋದರನ್ನು ಕೊಂದು ದೇಹದ ಬಾಗವನ್ನು ಕತ್ತರಿಸಿದ ಅಮಾನವೀಯ ಘಟನೆ ಜಬಲ್ಪುರದ ಸಿವಿಲ್ ಲೈನ್ಸ್ ಪ್ರದೇಶದ ಮಿಲೇನಿಯಮ್ ಸೊಸೈಟಿಯಲ್ಲಿ ಎರಡು ತಿಂಗಳ ಹಿಂದೆ ನಡೆದಿತ್ತು.

ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಕೊಲೆಗೈದು ತಲೆ ಮರೆಸಿಕೊಂಡಿದ್ದ ಹತ್ತನೇ ತರಗತಿಯ ವಿದ್ಯಾರ್ಥಿನಿಯನ್ನು ಹರಿದ್ವಾರ ಪೊಲೀಸರು ಮೇ 29ರಂದು ಬಂಧಿಸಿದ್ದಾರೆ.

Home add -Advt

ಮಾರ್ಚ್ 15 ರಂದು ಬಾಲಕಿ ತನ್ನ ತಂದೆ ಮತ್ತು ತಮ್ಮನನ್ನು ಕೊಂದು ದೇಹಗಳನ್ನು ತುಂಡುಗಳಾಗಿ ಕತ್ತರಿಸಿ ಫ್ರೀಜರ್‌ನಲ್ಲಿ ತುಂಬಿದ್ದಳು. ಬಳಿಕ ತನ್ನ ಲವರ್ ಜೊತೆ ಪರಾರಿಯಾಗಿದ್ದಳು.

Related Articles

Back to top button