Kannada NewsKarnataka NewsLatest

*ಕಂಠಪೂರ್ತಿ ಕುಡಿದು ಕರ್ತವ್ಯ ನಿರತ ಪೊಲೀಸರ ಕಿರಿಕ್; ಇಬ್ಬರು ASI, ಓರ್ವ ಹೆಡ್ ಕಾನ್ಸ್ ಟೇಬಲ್ ಅಮಾನತು*

ಪ್ರಗತಿವಾಹಿನಿ ಸುದ್ದಿ; ರಾಮನಗರ: ಕಂಠಪೂರ್ತಿ ಕುಡಿದು ಕರ್ತವ್ಯ ನಿರತ ಪೊಲೀಸರು ಕಾರಿನಲ್ಲಿ ಮೋಜು ಮಸ್ತಿಯಾಗಿ ಪ್ರಯಾಣಿಸಿದ್ದು ಅಲ್ಲದೇ ಸಾರ್ವಜನಿಕರ ಜೊತೆ ಗಲಾಟೆ ಮಾಡಿರುವ ಪ್ರಕರಣ ರಾಮನಗರ ಜಿಲ್ಲೆ ಮಾಗಡಿಯಲ್ಲಿ ನಡೆದಿದೆ.

ಖಾಕಿ ಮೈ ಮೇಲೆ ಇದ್ದರೂ ಮದ್ಯಪಾನ ಮಾಡಿ ಸಾರ್ವಜನಿಕರ ಜೊತೆ ಪೊಲೀಸರೇ ಕಿರಿಕ್ ಮಾಡಿದ್ದು, ನಡು ರಸ್ತೆಯಲ್ಲಿ ಗಲಾಟೆ ಮಾಡಿದ್ದಾರೆ. ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದ ಬೆನ್ನಲ್ಲೇ ರಾಮನಗರ ಎಸ್ ಪಿ ಕಾರ್ತಿಕ್ ಮೂವರು ಪೊಲೀಸರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.

ಚೆನ್ನಪಟ್ಟಣ ಟಾಣೆಯ ಎಎಸ್ಐ ನಾರಾಯಣಮೂರ್ತಿ, ಮಾಗಡಿ ಠಾಣೆಯ ಎಎಸ್ಐ ಮಂಜುನಾಥ್ ಹಾಗೂ ಇನ್ನೋರ್ವ ಹೆಡ್ ಕಾನ್ಸ್ ಟೇಬಲ್ ಅಮಾನತುಗೊಂಡವರು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button