Belagavi NewsBelgaum NewsKannada NewsKarnataka NewsLatest

*ರೈತರ ಗಮನಕ್ಕೆ…*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಅಲ್ಲಲ್ಲಿ ಮಳೆಯಾಗುತ್ತಿದ್ದು, ಇನ್ನು ಕೆಲವು ದಿನಗಳಲ್ಲಿ ಬಿತ್ತನೆ ಪ್ರಾರಂಭವಾಗಲಿದೆ. ಬಿತ್ತನೆ ಸಮಯದಲ್ಲಿ ರಸಗೊಬ್ಬರಗಳ ಸಮತೋಲನ ಬಳಕೆ ಕುರಿತು ಮಾಹಿತಿ ಅವಶ್ಯಕವಾಗಿದೆ.

ಪ್ರಮುಖವಾಗಿ ಸಸ್ಯಗಳ ಬೆಳವಣಿಗೆ ಮತ್ತು ಅಭಿವೃಧ್ಧಿಗೆ ಹದಿನೇಳು ಪೋಷಕಾಂಶಗಳ ಅಗತ್ಯವಿರುತ್ತದೆ. ಇವುಗಳಲ್ಲಿ ಯಾವುದೆ ಒಂದು ಪೋಷಕಾಂಶಗಳ ಕೊರತೆಯಾದರೂ ಸಸ್ಯಗಳು ಸಮೃಧ್ಧಿಯಾಗಿ ಬೆಳೆಯಲಾರವು ಹಾಗೂ ಇದರಿಂದ ನೀರಿಕ್ಷಿತ ಇಳುವರಿ ಸಾಧ್ಯವಿಲ್ಲ.
ಕಾರಣ ಬೆಳೆಗಳಿಗೆ ಸಮತೋಲನಾತ್ಮಕ ರಸಗೊಬ್ಬರಕ್ಕಾಗಿ ಬಿತ್ತನೆ ಸಮಯದಲ್ಲಿ ಪೊಟ್ಯಾಷ್ ಯುಕ್ತ ಕಾಂಪ್ಲೆಕ್ಸ್ ರಸಗೊಬ್ಬರ ಬಳಕೆ ಮಾಡುವುವುದು ಸೂಕ್ತ.

ಪ್ರಧಾನ ಪೋಷಕಾಂಶಗಳು ಹಾಗೂ ಲಘು ಪೋಷಕಾಂಶಗಳಿಗೆ ಭೂಮಿಯೇ ಮುಖ್ಯ ಆಧಾರ. ಮಣ್ಣಿನಿಂದ ಈ ಎಲ್ಲ ಪೋಷಕಾಂಶಗಳನ್ನು ಬೆಳೆಗೆ ಬೇಕಾದ ಪ್ರಮಾಣದಲ್ಲಿ ಮುಖ್ಯವಾಗಿ ರಸಗೊಬ್ಬರಗಳ ಮೂಲಕ ನೀಡಲಾಗುತ್ತಿದೆ.
ರೈತರು ಕೇವಲ ಒಂದು ಅಥವಾ ಎರಡು ಪೋಷಕಾಂಶ ಒಸಗಿಸುವ ಯೂರಿಯಾ ಹಾಗೂ ಡಿಎಪಿ ಬಳಸುತ್ತಿದ್ದಾರೆ. ಇವುಗಳಲ್ಲಿ ಸಾರಜನಕ ಮತ್ತು ರಂಜಕದ ಅಂಶಗಳು ಮಾತ್ರ ಇರುತ್ತವೆ. ಬೆಳೆಗಳಿಗೆ ಬರ ಮತ್ತು ರೋಗ ನಿರೋಧಕ ಶಕ್ತಿ ನೀಡಿ ಕಾಳಿನ ತೂಕ ಹೆಚ್ಚಿಸಲು ಅತ್ಯಂತ ಅವಶ್ಯವಾಗಿರುವ ಪೊಟ್ಯಾಷ್ ಲಭ್ಯವಿರುವುದಿಲ್ಲ.
ರೈತರು ಒಂದೇ ಸಂಸ್ಥೆಯ ಅಥವಾ ಒಂದೇ ರಸಗೊಬ್ಬರಕ್ಕೆ ಆದ್ಯತೆ ನೀಡದೇ ಡಿ.ಎ.ಪಿ ರಸಗೊಬ್ಬರಕ್ಕೆ ಬದಲಾಗಿ ಗಂಧಕ ಒದಗಿಸುವ ೨೦:೨೦:೦:೧೩ ಹಾಗೂ ಪೊಟ್ಯಾಷ್ ಒದಗಿಸುವ ಇತರ ಸಂಯುಕ್ತ ಗೊಬ್ಬರಗಳಾದ ೧೫;೧೫;೧೫, ೧೦:೨೬:೨೬, ೧೬:೨೦:೦, ೧೨:೩೨:೧೬, ೧೪:೩೫:೧೪, ೧೭;೧೭:೧೭, ೧೪:೨೮:೧೪, ೧೯:೧೯:೧೯, ೯:೨೪:೨೪, ಮತ್ತು ೨೪:೨೪:೦:೦೮ ಇತ್ಯಾದಿ ಕಾಂಪ್ಲೆಕ್ಸ್ ರಸಗೊಬ್ಬರಗಳನ್ನು ಸಹ ಬಳಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ರೈತರು ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ಕೃಷಿ ಇಲಾಖೆ ಕಛೇರಿ ಸಂಪರ್ಕಿಸಬಹುದಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

Related Articles

Back to top button