Kannada NewsLatest

ಸುದೀಪ ಶಿವಾನಂದ ಹೆಗಡೆಗೆ ರಾಜ್ಯಮಟ್ಟದ ಬಾಲಗೌರವ ಪ್ರಶಸ್ತಿ

ಪ್ರಗತಿವಾಹಿನಿ ಸುದ್ದಿ; ಧಾರವಾಡ: ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ ಬಾಲ ಎಕಾಡೆಮಿಯಿಂದ ಚಿತ್ರಕಲಾ ವಿಭಾಗದಲ್ಲಿ ನೀಡುವ ಬಾಲಗೌರವ ಪ್ರಶಸ್ತಿಯನ್ನು ಈ ವರ್ಷ ಬೆಳಗಾವಿಯ ಸುದೀಪ ಶಿವಾನಂದ ಹೆಗಡೆ ತನ್ನದಾಗಿಸಿಕೊಂಡಿದ್ದಾನೆ.

ಧಾರವಾಡದ ಡಾ.ಮಲ್ಲಿಕಾರ್ಜುನ ಮನ್ಸೂರ್ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸಮುಖದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಸಚಿವೆ ಶಶಿಕಲಾ ಜೊಲ್ಲೆ ಇವರು ಪ್ರಶಸ್ತಿ ಪ್ರದಾನ ಮಾಡಿದರು.

ಸುದೀಪ್ ಬೆಳಗಾವಿಯ ಶಿವಾನಂದ ಹಾಗೂ ಸುಮಾ ಹೆಗಡೆ  ಪುತ್ರ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button