Belagavi NewsBelgaum NewsKannada NewsKarnataka NewsLatestNational
*ನೂತನ ತಹಶೀಲ್ದಾರ್ ಆಗಿ ಬಲರಾಮ ಕಟ್ಟಿಮನಿ ನೇಮಕ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನೂತನ ತಹಶೀಲ್ದಾರ್ ಆಗಿ ಬಲರಾಮ ಕಟ್ಟಿಮನಿ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ತಹಶೀಲ್ದಾರ್ ಮಂಜುಳಾ ನಾಯಕ ಅವರ ಸ್ಥಾನಕ್ಕೆ ಬಲರಾಮ ಕಟ್ಟಿಮನಿ ಅವರನ್ನು ನೇಮಿಸಲಾಗಿದೆ. ಮುದ್ದೆಬಿಹಾಳ ತಾಲೂಕಿನಲ್ಲಿ ತಹಶೀಲ್ದಾರ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಬಲರಾಮ ಕಟ್ಟಿಮನಿ ಅವರನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಹುಕ್ಕೇರಿ ತಾಲೂಕಿಗೆ ಗ್ರೇಡ್ 1 ತಹಶೀಲ್ದಾರ ಆಗಿ ವರ್ಗಾಯಿಸಿ ಸರ್ಕಾರ ಆದೇಶಿಸಿದೆ.
ಹುಕ್ಕೇರಿ ತಾಲೂಕಿನಲ್ಲಿ ಬಲರಾಮ ಕಟ್ಟಿಮನಿ ಅವರು ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದ್ದರು.