Latest

*ಹೆಜ್ಜೇನು ದಾಳಿ ತಪ್ಪಿಸಿಕೊಳ್ಳಲು ನೀರಿಗೆ ಧುಮುಕಿದ ವ್ಯಕ್ತಿ ಸಮುದ್ರಪಾಲು*

ಪ್ರಗತಿವಾಹಿನಿ ಸುದ್ದಿ; ಉಡುಪಿ: ಹೆಜ್ಜೇನು ದಾಳಿಯಿಂದ ತಪ್ಪಿಸಿಕೊಳ್ಳಲು ಸಮುದ್ರಕ್ಕೆ ಹಾರಿದ ವ್ಯಕ್ತಿಯೋರ್ವ ನೀರು ಪಾಲಾಗಿರುವ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಡುಬಿದ್ರೆ ಬೀಚ್ ಬಳಿ ನಡೆದಿದೆ.

ಬೀಚ್ ಬಳಿ ಓಡಾಡುತ್ತಿದ್ದಾಗ ಏಕಾಏಕಿ ಹೆಜ್ಜೇನು ದಾಳಿ ಮಾಡಿವೆ. ಈ ವೇಳೆ ಹೆಜ್ಜೇನು ದಾಳಿಯಿಂದ ಕಂಗೆಟ್ಟ ಇಬ್ಬರು ಪಡುಬಿದ್ರೆ ಸಮುದಕ್ಕೆ ಹಾರಿದ್ದಾರೆ. ನೀರಿನಲ್ಲಿ ಮುಳುಗಿ ವ್ಯಕ್ತಿ ಮೃತಪಟ್ಟಿದ್ದಾರೆ. ಹೆಜ್ಜೇನು ದಾಳಿಗೆ ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ವಾಸುದೇವ್ ಡಿ ಸಾಲಿಯಾನ್ (65) ಮೃತರು. ಇನ್ನೋರ್ವ 65 ವರ್ಷದ ಚಂದ್ರಶೇಖರ್ ಸ್ಥಿತಿ ಗಂಭೀರವಾಗಿದೆ. ಪಡುಬಿದ್ರೆ ಬೀಚ್ ಬಳಿ ಹೆಜ್ಜೇನುಗಳನ್ನು ತೆರವುಗೊಳಿಸುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.

*ಆತ್ಮಹ್ಯೆಗೆ ಶರಣಾದ ಟೆಕ್ಕಿ ಮಹಿಳೆ*

Home add -Advt

https://pragati.taskdun.com/tekkisuicidebangalore/

Related Articles

Back to top button