Kannada NewsLatest

ಕೆಲಸಕ್ಕೆಂದು ಹೋದ ವ್ಯಕ್ತಿ ಏಕಾಏಕಿ ನಾಪತ್ತೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ; ಕೆಲಸಕ್ಕೆ ಹೋಗಿ ಬರುತ್ತೇನೆ ಎಂದು ಹೋದ ವ್ಯಕ್ತಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ.

ಬಜಾಜ್ ಶೋರೂಮ್ ನಲ್ಲಿ ಕೆಲಸ ಮಾಡುತ್ತಿದ್ದ ಅಹ್ಮದ್ ರಪೀಕ ಪೀರಜಾದೆ (28) ನಾಪತ್ತೆಯಾಗಿರುವ ವ್ಯಕ್ತಿ. ಹ್ಮದ್ ತಂದೆ ಸಯ್ಯದ್ ಬೆಳಗಾವಿ ಶಹಪೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ತಮ್ಮ ಮಗ ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಸೆ.9ರಂದು ಮನೆಯಿಂದ ಹೋದವನು ವಾಪಸ್ ಮನೆಗೆ ಬಂದಿಲ್ಲ. ಮಗ ನಾಪತ್ತೆಯಾಗಿದ್ದು ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ.

ಅಹ್ಮದ್ ತನ್ನ ಹೆಂಡತಿ ತನಗೆ ವಿವಾಹ ವಿಚ್ಛೇದನ ನೀಡುವ ಕುರಿತು ನೋಟಿಸ್ ಕಳುಹಿಸಿದ್ದಾಳೆ ಎಂದು ಕೆಲದಿನಗಳಿಂದ ಬೇಸರಗೊಂಡಿದ್ದ. ಈಗ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದು ಆತಂಕವುಂವುಂಟಾಗಿದೆ ಎಂದು ಅಹ್ಮದ್ ತಂದೆ ಅಳಲು ತೋಡಿಕೊಂಡಿದ್ದಾರೆ.

ಅಹ್ಮದ್ ವಯಸ್ಸು 28, 5 ಪೂಟ 8 ಇಂಚು ಎತ್ತರ, ಕೋಲು ಮುಖ, ನೆಟ್ಟನೆಮೂಗು, ಸದೃಡ ಮೈಕಟ್ಟು, ಗೋದಿಗೆಂಪು ಮೈಬಣ್ಣ ಹೊಂದಿದ್ದು, ಮನೆಯಿಂದ ಹೊರಡುವಾಗ ತಿಳಿ ನೀಲಿ, ಕಂದು ಮತ್ತು ಬಿಳಿ ಬಣ್ಣದ ಡಿಜೈನ್‌ವುಳ್ಳ ಉದ್ದ ತೋಳಿನ ಶರ್ಟ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದು, ಕನ್ನಡ, ಹಿಂದಿ ಇಂಗ್ಲಿಷ್ ಭಾಷೆ ಮಾತನಾಡುತ್ತಾನೆ.

ಈ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಪೊಲೀಸ್ ಆಯುಕ್ತರು, ಬೆಳಗಾವಿ ಅಥವಾ ಪೊಲೀಸ್ ಇನ್ಸಪೆಕ್ಟರ, ಶಹಾಪೂರ ಪೊಲೀಸ ಠಾಣೆ ಬೆಳಗಾವಿ, ಬೆಳಗಾವಿ ನಗರ ಪೊಲೀಸ್ ಕಂಟ್ರೋಲ್ ರೂಮ್ 0831- 2405233 ಶಹಾಪೂರ ಪೊಲೀಸ ಠಾಣೆ, ಬೆಳಗಾವಿ. ದೂರವಾಣಿ ಸಂ-0831-2405244 ಪಿ. ಐ, ಶಹಾಪೂರ ಪಿಎಸ್. ಮೋ ನಂ; 9480804046 ನ್ನು ಸಂಪರ್ಕಿಸಬೇಕು ಎಂದು ಬೆಳಗಾವಿ ಶಹಾಪೂರ ಪೊಲೀಸ್ ಠಾಣೆಯ ಸಿ.ಎಚ್.ಸಿ ಪ್ರಕಟಣೇಯಲ್ಲಿ ತಿಳಿಸಿದ್ದಾರೆ.

ಕಬಡ್ಡಿ ಹಾಗೂ ವಾಲಿಬಾಲ್ ಕ್ರೀಡಾಕೂಟ: ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಟಿ-ಶರ್ಟ್ ವಿತರಣೆ

https://pragati.taskdun.com/latest/kabaddivolleyball-gamesselected-students-for-district-levelt-shirtdistribution/

ED ವಿಚಾರಣೆ ವೇಳೆಯೇ ಡಿ.ಕೆ.ಶಿವಕುಮಾರ್ ಗೆ ಮತ್ತೊಂದು ಶಾಕ್!

https://pragati.taskdun.com/politics/d-k-shivakumarsupreme-courtstayhigh-court-order/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button