Kannada NewsLatest

ಹೊಸ ಕ್ಯಾತೆ ತೆಗೆದ ಶಿವಸೇನೆ; ಕನ್ನಡಿಗರಿಗೆ ಧಮ್ಕಿ ಹಾಕಿ ಬೆದರಿಕೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಶಿವಸೇನೆ ಕಾರ್ಯಕರ್ತರು ಇದೀಗ ಹೊಸ ಕ್ಯಾತೆ ಆರಂಭಿಸಿದ್ದಾರೆ. ಮಾರ್ಚ್ 20ರೊಗಳೆ ಬೆಳಗಾವಿ ಪಾಲಿಕೆ ಮುಂದಿನ ಕನ್ನಡ ಧ್ವಜ ತೆರವು ಮಾಡದಿದ್ದರೆ ಕೊಲ್ಹಾಪುರ ಸಾಂಗ್ಲಿ, ಸತಾರಾದಲ್ಲಿ ವ್ಯಾಪಾರ ವಹಿವಾಟು ಬಂದ್ ಮಾಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದರುವ ಶಿವಸೇನೆ ಅಧ್ಯಕ್ಷ ವಿಜಯ್ ದೇವನೆ, ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ಹೋಟೆಲ್, ಲಾರಿ, ಟ್ಯಾಂಕರ್, ಖಾಸಗಿ ವಾಹನಗಳ ಸಂಚಾರ , ಕೆ ಎಸ್ ಆರ್ ಟಿಸಿ ಬಸ್ ಸಂಚಾರವನ್ನು ಸಹ ಬಂದ್ ಮಾಡಲಾಗುವುದು ಎಂದು ಹೇಳಿದ್ದಾರೆ.

ಬಂದ್ ಗೆ ಸಹಕರಿಸದಿದ್ದರೆ ಮಹಾರಾಷ್ಟ್ರ ಕನ್ನಡಿಗರಿಗೆ ಶಿವಸೇನೆ ತಕ್ಕ ಪಾಠ ಕಲಿಸುವುದಾಗಿ ಧಮ್ಕಿ ಹಾಕಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button