Kannada NewsLatest

ಬೆಳಗಾವಿ ಚರ್ಚ್ ನಲ್ಲಿ ತಲ್ವಾರ್ ಹಿಡಿದು ಓಡಾಡಿದ ವ್ಯಕ್ತಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಚರ್ಚ್ ನಲ್ಲಿ ವ್ಯಕ್ತೊಯೋರ್ವ ತಲ್ವಾರ್ ಹಿಡಿದು ಓಡಾಡಿರುವ ಘಟನೆ ಬೆಳಗಾವಿಯ ವೈಭವನಗರದ ಸೇಂಟ್ ಜೊಸೆಫ್ ಚರ್ಚ್ ನಲ್ಲಿ ನಡೆದಿದೆ.

ಚರ್ಚ್ ನಲ್ಲಿ ವ್ಯಕ್ತಿ ತಲ್ವಾರ್ ಹಿಡಿದು ಓಡಾಡಿದ್ದು, ಈ ವೇಳೆ ಚರ್ಚ್ ಫಾದರ್ ಮನೆಯ ನಾಯಿ ಬೊಗಳಿದ್ದರಿಂದ ಫಾದರ್ ಹೊರಗೆ ಬಂದಿದ್ದಾರೆ. ಅಷ್ಟರಲ್ಲಿ ವ್ಯಕ್ತಿ ಪರಾರಿಯಾಗಿದ್ದಾನೆ. ವ್ಯಕ್ತಿಯ ಓಡಾಟ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸ್ಥಳಕ್ಕೆ ಎಪಿಎಂಸಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಲ್ವಾರ್ ಹಿಡಿದು ಓಡಾಡುತ್ತಿದ್ದ ವ್ಯಕ್ತಿಗೆ ಹುಡುಕಾಟ ನಡೆಸಿದ್ದಾರೆ.

ಮತಾಂತರ ನಿಷೇಧ ಕಾಯ್ದೆ ಜಾರಿ ಕುರಿತು ಚರ್ಚೆ ಹಾಗೂ ನಾಳೆಯಿಂದ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಆರಂಭವಾಗಲಿರುವ ಸಂದರ್ಭದಲ್ಲೇ ಈ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.
ಭೀಕರ ಚಂಡಮಾರುತ; 80 ಜನರ ದುರ್ಮರಣ

Home add -Advt

Related Articles

Back to top button