Karnataka NewsLatest

ಕನ್ನಡದ ಹಬ್ಬಕ್ಕೆ ಬೆಳಗಾವಿ ಸಜ್ಜು

https://youtu.be/hROlDJeMLAA

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕನ್ನಡದ ಹಬ್ಬಕ್ಕೆ ಬೆಳಗಾವಿ ಸಜ್ಜಾಗಿದೆ. ಕನ್ನಡ ರಾಜ್ಯೋತ್ಸವದ ಸಂಭ್ರಮಕ್ಕೆ ಬೆಳಗಾವಿಗರು ಸಿದ್ಧತೆ ನಡೆಸಿದ್ದಾರೆ.

ಕಿತ್ತೂರಿನಲ್ಲಿರುವ ಚನ್ನಮ್ಮ ಪುತ್ಥಳಿ

ನಗರದ ಕಿತ್ತೂರು ಚನ್ನಮ್ಮ ವೃತ್ತ ಅಲಂಕಾರಗೊಂಡಿದೆ. ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ನಗರದ ಹಲವೆಡೆ ಕನ್ನಡ ರಾಜ್ಯೊತ್ಸವಕ್ಕೆ ಸ್ವಾಗತ ಕೋರುವ ಕಮಾನುಗಳು ನಿರ್ಮಾಣಗೊಂಡಿವೆ. ಕನ್ನಡ ಹಬ್ಬಕ್ಕೆ ವಿವಿಧ ಮಾದರಿಯ ಸ್ಥಬ್ಧಚಿತ್ರಗಳು ಸಿದ್ದಗೊಂಡಿವೆ. ನಗರದೆಲ್ಲೆಡೆ ಸ್ಥಬ್ಧ ಚಿತ್ರಗಳ ಮೆರವಣಿಗೆ ನಡೆಯಲಿವೆ.

ಶುಕ್ರವಾರ ಬೆಳಗ್ಗೆ 10.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಕನ್ನಡ ರಾಜ್ಯೋತ್ಸವ ಸಂಭ್ರಮಕ್ಕೆ ಚಾಲನೆ ನೀಡಲಿದ್ದಾರೆ. ಗಣ್ಯರ ಉಪಸ್ಥಿತಿಯಲ್ಲಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ವಿವಿಧ ಕನ್ನಡ ಸಂಘಟನೆಗಳು ಇಂದು ಮಧ್ಯರಾತ್ರಿಯೇ ಕನ್ನಡ ರಾಜ್ಯೋತ್ವದ ಸಂಭ್ರಮ ಆಚರಿಸಲು ಮುಂದಾಗಿದ್ದಾರೆ. ರಾತ್ರಿ 12 ಗಂಟೆಗೆ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಸಂಭ್ರಮಿಸಲಿದ್ದಾರೆ.

Home add -Advt

ಕನ್ನಡ ರಾಜ್ಯೋತ್ಸವ ಎಂದರೆ ಬೆಳಗಾವಿಗರಿಗೆ ಎಲ್ಲಿಲ್ಲದ ಉತ್ಸಾಹ. ಬೆಳಗ್ಗೆ ಆರಂಭವಾಗುವ ಮೆರವಣಿಗೆ ಸಂಜೆಯವರೆಗೂ ಮುಂದುವರಿಯಲಿದೆ. ಕನ್ನಡಿಗರ ಉತ್ಸಾಹ ಕಂಡು ಮಹಾರಾಷ್ಟ್ರ ಏಕೀಕರಣ ಸಮಿತಿ ಮಂಕಾಗುತ್ತದೆ. ವರ್ಷದಿಂದ ವರ್ಷಕ್ಕೆ ಎಂಇಎಸ್ ಕರಾಳ ದಿನ ಕ್ಷೀಣಿಸುತ್ತ ಕೊನೆಯುಸಿರೆಳೆಯುತ್ತಿದೆ.

ಶುಕ್ರವಾರ ಸಂಜೆ ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕನ್ನಡ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಲಾಗುತ್ತದೆ.

Related Articles

Back to top button