Karnataka News

*ರಾಜ್ಯದ ಜನತೆಗೆ ಬಿಗ್ ಶಾಕ್: ಇಂದಿನಿಂದ ದುಬಾರಿ ದುನಿಯಾ ಆರಂಭ*

ಹಾಲು, ಟೋಲ್ ನಿಂದ ಹಿಡಿದು ಕಸದವರೆಗೂ ಟ್ಯಾಕ್ಸ್ ಹೆಚ್ಚಳ

ಪ್ರಗತಿವಾಹಿನಿ ಸುದ್ದಿ: ತಿಂಗಳ ಮೊದಲ ದಿನವೇ ರಾಜ್ಯದ ಜನತೆಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಇಂದಿನಿಂದ ರಾಜ್ಯದಲ್ಲಿ ದುಬಾರಿ ದುನಿಯಾ ಆರಂಭವಾಗಿದೆ.

ಇಂದಿನಿಂದ ನಂದಿನಿ ಹಾಲಿನ ದರ ಲೀಟರ್ ಗೆ 4 ರೂಪಾಯಿ ಹೆಚ್ಚಳವಾಗಿದೆ. ಮೊಸರಿನ ದರದಲ್ಲಿಯೂ ಏರಿಕೆಯಾಗಿದೆ. ಇದರ ಜೊತೆಗೆ ವಿದ್ಯುತ್ ಬಿಲ್ ಯೂನಿಟ್ ದರದಲ್ಲಿ ಇಂದಿನಿಂದ ಹೆಚ್ಚಳವಾಗಲಿದೆ.

Home add -Advt

ಹಾಲು, ಮೊಸರು, ವಿದ್ಯುತ್ ಬಿಲ್ ಏರಿಕೆ ಜೊತೆಗೆ ಬೆಂಗಳೂರಿಗರು ಕಸಕ್ಕೂ ಟ್ಯಾಕ್ಸ್ ಕಟ್ಟಬೇಕು. ಇಂದು ಏಪ್ರಿಲ್ 1ರಿಂದ ಬೆಂಗಳೂರಿನಲ್ಲಿ ಪ್ರತಿ ಮನೆ, ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಕಟ್ಟಡಗಳ ಬಳಿ ಕಸ ಸಂಗ್ರಹಕ್ಕೆ ತೆರಿಗೆ ವಸೂಲಿಗೆ ಬಿಬಿಎಂಪಿ ಮುಂದಾಗಿದೆ.

ಈಗಾಗಲೇ ಕಸಕ್ಕೆ ತೆರಿಗೆ ವಿಧಿಸುವ ಕ್ರಮ ಬಿಬಿಎಂಪಿ ಬಜೆಟ್ ನಲ್ಲಿಯೂ ಘೋಷಣೆಯಾಗಿದೆ. ಈ ಮೂಲಕ 600 ಕೋಟಿ ರೂ ಆದಾಯ ಸಂಗ್ರಹಕ್ಕೆ ಪಾಲಿಕೆ ಮುಂದಾಗಿದೆ.

ಅಂಗಡಿ ಮುಂಗಟ್ಟುಗಳಲ್ಲಿ ಪ್ರತಿ ಕೆಜಿ ಕಸಕ್ಕೆ 12 ರೂ. ತೆರಿಗೆ ವಸೂಲಿಗೆ ಪಾಲಿಕೆ ನಿರ್ಧರಿಸಿದೆ. ಕಟ್ಟಡದ ವಿಸ್ತೀರ್ಣ ಆಧಾರದ ಮೇಲೆ ಕಸ ತೆರಿಗೆ ಶುಲ್ಕ ಹೆಚ್ಚಳವಾಗಲಿದೆ. ಇನ್ಮುಂದೆ ಆಸ್ತಿ ತೆರಿಗೆ ಜೊತೆಗೆ ಕಸ ತೆರಿಗೆಯೂ ಅನ್ವಯವಾಗಲಿದೆ.
600 ಚದರ ಅಡಿ ಕಟ್ಟಡಗಳಿಗೆ ತಿಂಗಳಿಗೆ 10 ರೂ. ತೆರಿಗೆ
600-1000 ಚದರ ಅಡಿ ಕಟ್ಟಡಗಳಿಗೆ ತಿಂಗಳಿಗೆ 50 ರೂ ತೆರಿಗೆ
1000-2000 ಚದರ ಅಡಿ ಕಟ್ಟಡಗಳಿಗೆ ತಿಂಗಳಿಗೆ 100 ರೂ ತೆರಿಗೆ
2000-3000 ಚದರ ಅಡಿ ಕಟ್ಟಡಗಳಿಗೆ 150 ರೂ
3000-4000 ಚದರ ಅಡಿ ಕಟ್ಟಡಗಳಿಗೆ 200 ರೂ
4000 ಚದರ ಅಡಿ ಮೇಲ್ಪಟ್ಟ ಕಟ್ಟಡಗಳಿಗೆ 400 ರೂ ತೆರಿಗೆ ವಿಧಿಸಲಾಗುತ್ತಿದೆ.

ಇನ್ನು ರಾಜ್ಯದಲ್ಲಿ ಇಂದಿನಿಂದ ಟೋಲ್ ದರ ಹೆಚ್ಚಳವಾಗಿದೆ. 66 ಟೋಲ್ ಪ್ಲಾಜಾಗಳಲ್ಲಿ ಹೆದ್ದಾರಿ ಪ್ರಾಧಿಕಾರ ಟೋಲ್ ದರವನ್ನು ಶೇ.3ರಿಂದ ಶೇ.5ಕ್ಕೆ ಹೆಚ್ಚಿಸಿದೆ. ಇದರೊಂದಿಗೆ ಹೊಸ ವಾಹನ ಖರೀದಿ ಮಾಡುವವರಿಗೂ ಬೆಲೆ ಏರಿಕೆ ಬಿಸಿ ತಟ್ಟಿದೆ. ಇಂದಿನಿಂದ ವಾಹನ ಖರೀದಿ ದರವೂ ಏರಿಕೆಯಾಗಿದೆ. ಒಟ್ಟಾರೆ ರಾಜ್ಯದಲ್ಲಿ ದುಬಾರಿ ದುನಿಯಾ ಶುರುವಾಗಿದ್ದು, ಜನ ಸಾಮಾನ್ಯರ ಬದುಕು ದುಸ್ಥರವಾಗುತ್ತಿದೆ.

Related Articles

Back to top button