Kannada NewsKarnataka NewsLatest

ಖಾನಾಪುರ ತಾಲೂಕಿನಾದ್ಯಂತ ಭಾರತ ಮಾತೆ ಫೋಟೊ ಅಭಿಯಾನ

 ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲೂಕಿನ ಹಳ್ಳಿಯಲ್ಲಿ ಭಾರತಮಾತೆ‌ ಫೋಟೋ ಅಭಿಯಾನ ಮಾಡಿದ ಡಾ. ಸೋನಾಲಿ ಸರ್ನೋಬತ.

ತಾಲೂಕಿನ ಹಳ್ಳಿ ಹಳ್ಳಿಗೆ ಮಹಿಳಾ ಸಂಘಗಳಿಗೆ ಹಾಗೂ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ಮನೆಗೆ ಬಿಜೆಪಿ ಮಹಿಳಾ ಮೋರ್ಚಾ ಪ್ರಭಾರಿ, ಬೆಳಗಾವಿ ಗ್ರಾಮೀಣ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಡಾ. ಸೋನಾಲಿ ಸರ್ನೋಬತ ಅವರು ಭೇಟಿ ನೀಡಿ ” ಭಾರತಮಾತೆ ಫೋಟೋ ನೀಡಿ ಸತ್ಕರಿಸಿದರು.

ಈ ವೇಳೆ ಮಾತನಾಡಿದ ಡಾ. ಸೋನಾಲಿ, ಮುಂಬರುವ ಚುನಾವಣೆಯಲ್ಲಿ ಖಾನಾಪುರ ವಿದಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುವ ನಿಟ್ಟಿನಲ್ಲಿ ಪಕ್ಷದ ಸಂಘಟನೆ ಯನ್ನು ಬಲಪಡಿಸಬೇಕಿದೆ. ಇದಕ್ಕಾಗಿ ಪ್ರತಿಯೊಬ್ಬರಲ್ಲಿ ರಾಷ್ಟ್ರ, ರಾಷ್ಟ್ರ, ರಾಷ್ಟ್ರೀಯತೆಯ ಭಾವನೆ ಜಾಗೃತಗೊಳ್ಳಬೇಕಿದೆ. ಇದಕ್ಕಾಗಿ ಭಾರತ ಮಾತೆ ಫೋಟೊ ನೀಡುವ ಅಭಿಯಾನ ಕೈಗೊಳ್ಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ನಾಗೇಶ್ ರಾಮಜಿ, ಬಾಳೇಶ ಚವ್ವನ್ನವರ, ಪರಶುರಾಮ್ ಕೋಲಕಾರ, ಮಹಿಳಾ ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು.

 

 

*ಜನಾರ್ಧನ ರೆಡ್ಡಿ ರಾಜಕಾರಣಕ್ಕೆ ಮುನ್ನುಡಿಯಾಗಲಿದೆಯಾ ನೂತನ ಮನೆ ಗೃಹ ಪ್ರವೇಶ?*

https://pragati.taskdun.com/janardhana-reddyghuhapraveshagangavatikoppala/

*ಹಿಂದು- ಮುಸ್ಲಿಂ ಪ್ರೇಮ ಪ್ರಕರಣ: 18 ವಿದ್ಯಾರ್ಥಿಗಳ ಅಮಾನತ್ತು*

https://pragati.taskdun.com/18-students-suspended-in-vitla-pu-college/

*ದಂಗುಬಡಿಸಿದ ಕೇಂದ್ರ ಸರಕಾರದ ಜಾಹೀರಾತು ವೆಚ್ಚ* !

https://pragati.taskdun.com/actress-abhinaya2-yers-jailhigh-courtdowry-harassment-case/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button