Latest

*ಭಯಾನಕ ಘಟನೆ: ಕಾರು ಚಾಲಕನನ್ನು 1ಕೀ.ಮಿ ನಡುರಸ್ತೆಯಲ್ಲಿ ಎಳೆದೊಯ್ದ ಬೈಕ್ ಸವಾರ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೈಕ್ ಸವಾರನೊಬ್ಬನ ಅಮಾನವೀಯ ವರ್ತನೆಗೆ ರಾಜ್ಯ ರಾಜಧಾನಿ ಬೆಂಗಳೂರಿಗರು ಬೆಚ್ಚಿ ಬಿದ್ದಿದ್ದಾರೆ. ಬೊಲೆರೋ ವಾಹನ ಚಾಲಕನೊಬ್ಬನನ್ನು ಬೈಕ್ ಸವಾರ ರಸ್ತೆಯಲ್ಲಿ ಒಂದುವರೆ ಕಿ.ಮೀ ವರೆಗೂ ಎಳೆದೊಯ್ದಿರುವ ಘಟನೆ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ನಡೆದಿದೆ.

ಬೈಕ್ ಹಿಂಬದಿ ಸೀಟ್ ರಿಂಗ್ ಹಿಡಿದಿದ್ದ ಚಾಲಕ ಮೃಗೀಯ ವರ್ತನೆ ತೋರಿದ್ದು, ಬೈಕ್ ಹಿಂಬದಿಗೆ ಜೋತು ಬಿದ್ದಿದ್ದ ವ್ಯಕ್ತಿಯೋರ್ವರನ್ನು 1 ಕೀ.ಮೀ ರಸ್ತೆಯಲ್ಲಿ ಎಳೆದುಕೊಂಡು ಹೋಗಿರುವ ಅಮಾನವೀಯ ಘಟನೆ ನಡೆದಿದೆ.

ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿ ಬೈಕ್ ಹಾಗೂ ಬೊಲೆರೋವಾಹನ ನಡುವೆ ಇಂದು ಮಧ್ಯಾಹ್ನ ಅಪಘಾತ ಸಂಭವಿಸಿದೆ. ಈ ವೇಳೆ ಕಾರು ಚಾಲಕ ಹಾಗೂ ಬೈಕ್ ಸವಾರನ ನಡುವೆ ಜಗಳವಾಗಿ ಮಾತಿಗೆ ಮಾತುಬೆಳೆದಿದೆ. ಗಲಾಟೆ ವಿಪರೀತಕ್ಕೆ ಹೋಗುತ್ತಿದ್ದಂತೆ ಬೈಕ್ ಸವಾರ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಬೈಕ್ ಹತ್ತಿ ಪರಾರಿಯಾಗುತ್ತಿದ್ದ ಬೈಕ್ ಸವಾರನನ್ನು ತಡೆಯಲು ಕಾರು ಚಾಲಕ ಬೈಕ್ ನ ಹಿಂಬದಿ ಸೀಟ್ ಬಳಿಯ ರಿಂಗ್ ಹಿಡಿದಿದ್ದಾರೆ. ಆದರೂ ಬೈಕ್ ನಿಲ್ಲಿಸದ ಸವಾರ ಬೈಕ್ ಓಡಿಸಿಕೊಂಡು ಹೋಗಿದ್ದಾನೆ. ಬೈಕ್ ರಿಂಗ್ ಹಿಡಿದಿದ್ದ ಚಾಲಕ ಜೋತು ಬಿದ್ದಿರುವುದನ್ನು ಕಂಡರೂ ಬೈಕ್ ನಿಲ್ಲಿಸದ ಸವಾರ ಇನ್ನಷ್ಟು ವೇಗವಾಗಿ ಬೈಕ್ ಓಡಿಸಿಕೊಂಡು ಹೋಗಿದ್ದಾನೆ. ಚಾಲಕನನ್ನು ಸುಮಾರು ಒಂದುವರೆ ಕಿ.ಮೀ ವರೆಗೂ ರಸ್ತೆಯಲ್ಲಿಯೇ ಎಳೆದಾಡಿಕೊಂಡು ಹೋಗಿದ್ದಾನೆ.

ಚಾಲಕ ರಸ್ತೆಗೆ ಉಜ್ಜಿಕೊಂಡು ಪರದಾಡುತ್ತಿದರೂ ಬೈಕ್ ಸವಾರನ ಮನಸ್ಸು ಕರಗಿಲ್ಲ, ವೇಗವಾಗಿ ಬೈಕ್ ಓಡಿಸಿಕೊಂಡೆ ಸಾಗಿದ್ದಾನೆ. ವಯಸ್ಸಾದ ಚಾಲಕನನ್ನು ರಸ್ತೆಯಲ್ಲಿ ಎಳೆದೊಯ್ಯುತ್ತಿರುವ ಅಮಾನವೀಯ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೆಟ್ರೋ ನಿಲ್ದಾಣ ಬಳಿಯ ಇನ್ನೊಂದು ಸಿಗ್ನಲ್ ಬಳಿ ಸಾರ್ವಜನಿಕರು ಬೈಕ್ ಸವಾರನನ್ನು ಅಡ್ದಗಟ್ಟಿ ನಿಲ್ಲಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಚಾಲಕನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದು, ಬೈಕ್ ಸವಾರನನ್ನು ವಶಕ್ಕೆ ಪಡೆದಿದ್ದಾರೆ. ಗಾಯಾಳು ಟಾಟಾಸುಮೋ ಚಾಲಕನನ್ನು ಮುತ್ತಪ್ಪ ಎಂದು ಗುರುತಿಸಲಾಗಿದೆ.

*ಮನೆಗೆ ನುಗ್ಗಿ ಯುವತಿಯನ್ನು ಬರ್ಬರವಾಗಿ ಹತ್ಯೆಗೈದು ಎಸ್ಕೇಪ್ ಆದ ದುಷ್ಕರ್ಮಿ*

https://pragati.taskdun.com/23-years-girlmurderknife-attakmangalore/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button