Kannada NewsKarnataka News

ಬಿಜೆಪಿ ಯ್ಯೂಸ್ ಆಂಡ್ ಥ್ರೋ ಪಕ್ಷ, ಬಡಿದಾಡಲು ಮಾತ್ರ ಕಾರ್ಯಕರ್ತರು ಬೇಕು – ಸತೀಶ್ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – 
ಬಿಜೆಪಿ ಯಾವಾಗಲೂ ಯ್ಯೂಸ್ ಆಂಡ್ ಥ್ರೋ ಪಕ್ಷ.   ಕಾರ್ಯಕರ್ತರನ್ನು ಯ್ಯೂಸ್ ಆಂಡ್ ಥ್ರೋ ಮಾಡಿಕೊಳುತ್ತಿದೆ. ಅವರಿಗೆ ಹೊಡೆದಾಲು, ಬಡಿದಾಡಲು ಮಾತ್ರ ಕಾರ್ಯಕರ್ತರು ಬೇಕು. ಸಂತೋಷ ಪ್ರಕರಣದಲ್ಲೂ ಹಾಗೇ ಆಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
 ಬೆಳಗಾವಿ ಗುತ್ತಿಗೆದಾರ ಸಂತೋಷ ಪಾಟೀಲ ಸಚಿವ ಈಶ್ವರಪ್ಪನವರ ಮೇಲೆ ಡೇತ್ ನೋಟ್ ಮೆಸೇಜ್ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಶ್ವರಪ್ಪ ರಾಜೀನಾಮೆ ನೀಡೊವರೆಗೂ ಕಾಂಗ್ರೆಸ್ ಹೋರಾಟ ನಡೆಸುತ್ತದೆ ಎಂದರು.
ಪ್ರತಿ ಜಿಲ್ಲೆ ಜಿಲ್ಲೆ, ಜಿಲ್ಲಾಮಟ್ಟ, ತಾಲೂಕಾ ಮಟ್ಟದಲ್ಲಿ ಹೋರಾಟ ಮಾಡುತ್ತೇವೆ.  ಬೇರೆಯವರ ವಿಚಾರದಲ್ಲಿ ಎಫ್ ಐಆರ್ ಆಗೋ ಮೊದಲೇ ಬಿಜೆಪಿಯವರು ರಾಜೀನಾಮೆ ಪಡಿಯುತ್ತಾರೆ.  ಆದರೆ ಸಚಿವ ಈಶ್ವರಪ್ಪ ವಿಚಾರದಲ್ಲಿ ಎಫ್ಐ ಆರ್  ಆಗಿದೆ. ಅಲ್ಲದೆ, ಕುಟುಂಬಸ್ಥರು ಆರೋಪ ಮಾಡ್ತಿದ್ದಾರೆ. ಈಶ್ವರಪ್ಪ ಅವರನ್ನ ಬಂಧಿಸಲು ಇಷ್ಟು ಸಾಕಲ್ಲವೆ ಎಂದು ಪ್ರಶ್ನಿಸಿದರು.
ಬಿಜೆಪಿಯವರದ್ದು ದೊಡ್ಡ ಪಕ್ಷ. ಪ್ರಾಮಾಣಿಕ ಪಕ್ಷ ಅಂತಾ ಹೇಳಿಕೊಳ್ಳುತ್ತಾರೆ.  ಸಂತೋಷ ಆತ್ಮಹತ್ಯೆ ಪ್ರಕರಣದಲ್ಲಿ ಎಷ್ಟು ಪ್ರಾಮಾಣಿಕ ಇರುತ್ತಾರೆ ಎಂದು ನೋಡೋಣ.  ಡಿಕೆ ರವಿ, ಹರ್ಷ ವಿಚಾರದಲ್ಲಿ ಬಿಜೆಪಿಯವರು ಏನು‌ ಮಾಡಿದ್ದರು ಎಂದು  ಎಲ್ಲರಿಗೂ ಗೊತ್ತಿರುವ ವಿಚಾರ ಎಂದರು.

Related Articles

Back to top button