Latest

ಬಿಜೆಪಿಯಿಂದ ಕರಾಳ ದಿನಾಚರಣೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: 

ಬಿಜೆಪಿ-ಕರ್ನಾಟಕ ಮತ್ತು ಲೋಕತಂತ್ರ ಸೇನಾನಿ ಆ್ಯಕ್ಶನ್ ಕಮಿಟಿ – ಕರ್ನಾಟಕ ವತಿಯಿಂದ   ಜಗನ್ನಾಥ ಭವನದಲ್ಲಿ ಇಂದು 1975 ಜೂನ್ 25ರಂದು ದೇಶದಲ್ಲಿ ತುರ್ತುಸ್ಥಿತಿ ಹೇರಿದ ಕರಾಳ ದಿನಾಚರಣೆ ಆಯೋಜಿಸಲಾಗಿತ್ತು.

ರಾಜ್ಯ ಬಿಜೆಪಿ ಅಧ್ಯಕ್ಷ  ಬಿ.ಎಸ್.ಯಡಿಯೂರಪ್ಪ ಅವರು ಅಧ್ಯಕ್ಷತೆ ವಹಿಸಿ, ಭಾರತಾಂಬೆಗೆ ಪುಷ್ಪಾರ್ಚನೆ ಮಾಡಿದರು.

ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ   ಎನ್.ರವಿಕುಮಾರ್, ಲೋಕತಂತ್ರ ಸೇನಾನಿ ಆ್ಯಕ್ಶನ್ ಕಮಿಟಿ ರಾಜ್ಯ ಅಧ್ಯಕ್ಷ  ಮಂಜುನಾಥ ಸ್ವಾಮಿ,  ರಾಜ್ಯ ಬಿಜೆಪಿ ವಕ್ತಾರ  ಗೋ.ಮಧುಸೂದನ್, ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ   ಬಿ.ವೈ.ವಿಜಯೇಂದ್ರ , ಬಿಜೆಪಿ ಮುಖಂಡ  ಛಾಯಪತಿ,  ರಾಜ್ಯ ಬಿಜೆಪಿ ಕಾರ್ಯಾಲಯ ಕಾರ್ಯದರ್ಶಿ   ಗಣೇಶ ಯಾಜಿ, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ  ಭಾರತಿ ಶೆಟ್ಟಿ ಹಾಗೂ ತುರ್ತುಸ್ಥಿತಿ ಸಂದರ್ಭದಲ್ಲಿ ಸೆರೆವಾಸ ಅನುಭವಿಸಿದ ಪ್ರಮುಖ ಹಿರಿಯರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button