Belagavi NewsBelgaum NewsKannada NewsKarnataka NewsLatest

ರಾಷ್ಟ್ರಧ್ವಜದ ಪಕ್ಕದಲ್ಲೇ ಕೇಸರಿ ಧ್ವಜ ಹಾರಾಟ ಯತ್ನ; ನಿಪ್ಪಾಣಿ ನಗರಸಭೆ ಎನ್ ಸಿಪಿ ಸದಸ್ಯರ ಹಾರಾಟಕ್ಕೆ ಪೊಲೀಸರ ಬ್ರೇಕ್

ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ಈವರೆಗೆ ಕನ್ನಡದ ವಿರುದ್ಧವಷ್ಟೇ ಸಮರ ಸಾರಿದ್ದ ಕೆಲವರು ಇದೀಗ ರಾಷ್ಟ್ರೀಯ ಹಬ್ಬದಲ್ಲೂ ಮೆರೆಯಲು ಮುಂದಾದ ಹೊಸ ದುಂಡಾವರ್ತಿಗೆ ಪೊಲೀಸರು ಬ್ರೇಕ್ ಹಾಕಿದ್ದಾರೆ.

ನಿಪ್ಪಾಣಿ ನಗರಸಭೆ ಮೇಲೆ ರಾಷ್ಟ್ರಧ್ವಜಾರೋಹಣದ ಬಳಿಕ ಕೇಸರಿ ಧ್ವಜ ಹಾರಿಸಲು ಮುಂದಾದ ಇಬ್ಬರು ಎನ್ ಸಿಪಿ ಸದಸ್ಯರ ಪ್ರಯತ್ನವನ್ನು ಪೊಲೀಸರು ತಡೆದಿದ್ದಾರೆ.

ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಅಧಿಕಾರಿಗಳು ಧ್ವಜಾರೋಹಣ ನೆರವೇರಿಸಿದ ಬಳಿಕ ನಿಪ್ಪಾಣಿ ನಗರಸಭಾ ಸದಸ್ಯರಾದ ವಿನಾಯಕ ವಾಡೆ ಹಾಗೂ ಸಂಜಯ ಸಾಂಗಾವಕರ್ ಅವರು ಕೇಸರಿ ಧ್ವಜ ಹಾರಿಸಲು ಮುಂದಾಗಿದ್ದಾರೆ. ಆದರೆ ಕೂಡಲೆ ಮಧ್ಯ ಪ್ರವೇಶಿಸಿ ಈ ಯತ್ನಕ್ಕೆ ಕಡಿವಾಣ ಹಾಕಿದ ಪೊಲೀಸರು ಇಬ್ಬರನ್ನೂ ತೀವ್ರ ತರಾಟೆಗೆ ತೆಗೆದುಕೊಂಡರು.

ಇವರಿಬ್ಬರೂ ಎನ್ ಸಿಪಿ ಬೆಂಬಲದೊಂದಿಗೆ ನಿಪ್ಪಾಣಿ ನಗರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

Home add -Advt

Related Articles

Back to top button