Belagavi NewsBelgaum NewsKannada NewsKarnataka NewsLatest

ಉದ್ಯಮಿ ಪ್ರಕಾಶ ಉಪಾಧ್ಯೆ ನಿಧನ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ, ಯಶವಂತ ಗ್ರುಪ್ ಆಪ ಇಂಡಸ್ಟ್ರೀಜ ಮಾಲಿಕರು , ಆದಿನಾಥ ಅಲ್ಪಸಂಖ್ಯಾತರ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರಾದ ಹಾಗೂ ಜೈನ ಸಮಾಜದ ಮುಖಂಡರು, ಭಾಗ್ಯನಗರ ನಿವಾಸಿ ಪ್ರಕಾಶ ಉಪಾಧ್ಯೆ ( ವ.೭೬ ) ಅವರು ಶನಿವಾರ ಸೆ. ೭ ರಂದು ಬೆಳಿಗ್ಗೆ ೯ ಗಂಟೆಗೆ ಹೃದಾಯಾಘಾತದಿಂದ ನಿಧನರಾದರು.
ಪ್ರಕಾಶ ಉಪಾಧ್ಯೆ ಕಳೆದ ೬೦ ವರ್ಷಗಳಿಂದ ಬೆಳಗಾವಿಯ ಉದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿ ತಮ್ಮದೇ ಆದ ವಿಶೇಷ ಛಾಪು ಮೂಡಿಸಿದ್ದರು. ಧಾರ್ಮಿಕ, ಶೈಕ್ಷಣಿಕ, ಆರ್ಥಿಕ ಕ್ಷೇತ್ರಗಳಲ್ಲಿ ವಿಶೇಷ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ. ಪ್ರಕಾಶ ಉಪಾಧ್ಯೆ ಅವರ ಅಂತ್ಯಕ್ರಿಯೆ ಶನಿವಾರ ಸಾಯಂಕಾಲ ಅನಗೋಳ ರುದ್ರಭೂಮಿಯಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜಯ ಪಾಟೀಲ, ಶ್ರೀಪಾಲ ಖೇಮಲಾಪೂರೆ, ರಾಜು ಹನಮಣ್ಣವರ ಅವರು ಮಾತನಾಡಿ ಶೃದ್ದಾಂಜಲಿ ಸಲ್ಲಿಸಿದರು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button