Latest

*ಧುರ್ಯೋಧನ ಯಾರೆಂದು ಗೊತ್ತಿಲ್ಲ, ನಾನಂತು ಅರ್ಜುನ; ಸಿ.ಟಿ ರವಿಗೆ ತಿರುಗೇಟು ನೀಡಿದ ಶಾಸಕ ಶಿವಲಿಂಗೇಗೌಡ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯ ಮಂಡಿಸಿದ ಶಾಸಕ ಸಿ.ಟಿ.ರವಿ, ಡಬಲ್ ಎಂಜಿನ್ ಸರ್ಕಾರದ ಪ್ರಯೋಜನಗಳ ಬಗ್ಗೆ ಪ್ರಸ್ತಾಪಿಸುತ್ತ, ಶಿವಲಿಂಗೇಗೌಡರು ಈಗ ಡಬಲ್ ಮೂಡ್ ನಲ್ಲಿದ್ದಾರೆ ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡರ ಕಾಲೆಳೆದರು.

ಎಣ್ಣೆ ಬರುತ್ತಾ ಇದೆ. ಕಣ್ಣು ಮುಚ್ಚಿಕೊಳ್ಳಬೇಡಿ ಎಂದು ನಾನು ಹೇಳಿದ್ದೆ ಆದರೆ ಶಾಸಕ ಶಿವಲಿಂಗೇಗೌಡರು ಕೇಳಲಿಲ್ಲ. ಶಿವಲಿಂಗೇಗೌಡ ಈಗ ಚಕ್ರವ್ಯೂಹದಲ್ಲಿ ಸಿಲುಕಿದ್ದಾರೆ ಎಂದರು. ಸಿ.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕರು, ನಾನು ಚಕ್ರವ್ಯೂಹದಲ್ಲಿ ಸಿಲುಕಿಲ್ಲ, ಅಭುಮನ್ಯು ಆಗುವುದೂ ಇಲ್ಲ. ನಾನು ಅರ್ಜುನ ಎಂದು ತಿರುಗೇಟು ನೀಡಿದರು.

ಜನಬಲ ಇರುವವರೆಗೂ ನಾನು ಅರ್ಜುನ. ಅಭಿಮನ್ಯು ಆಗಿ ನಾನು ಸಿಕ್ಕಿಹಾಕಿಕೊಳ್ಳಲ್ಲ, ಅಭಿಮನ್ಯು ಪಾತ್ರ ಏನು? ಕುತಂತ್ರ ಏನು ಎಂದು ತಿಳಿದುಕೊಂಡಿದ್ದೇನೆ. ಅಭಿಮನ್ಯುವನ್ನು ಕೊಂದಿದ್ದು ಯಾರೆಂದು ನನಗೆ ಗೊತ್ತಿಲ್ವಾ? ನಾನು ಅರ್ಜುನನ ಪಾತ್ರ ಹಾಕುವುದು ಎಂದರು. ಮತ್ತೆ ಶಿವಲಿಂಗೇಗೌಡರ ಕಾಲೆಳೆದ ಸಿ,ಟಿ ರವಿ ನಿಮ್ಮ ಸುತ್ತ ಇರುವ ದುರ್ಯೋಧನ ಯಾರು ಅಂತ ನೋಡಿಕೊಳ್ಳಿ ಎಂದು ಹೇಳಿದರು.

ಸಿ.ಟಿ.ರವಿ ಹೇಳಿಕೆಗೆ ಉತ್ತರಿಸಿದ ಶಿವಲಿಂಗೇಗೌಡರು, ದುರ್ಯೋಧನ ಯಾರು ಅಂತ ಗೊತ್ತಿಲ್ಲ, ನಾನಂತು ಅರ್ಜುನ. ನಾನು ಅರ್ಜುನನ ಪಾತ್ರಧಾರಿ. ನಾನು ಚಕ್ರವ್ಯೂಹದಲ್ಲಿ ಸಿಕ್ಕಿಹಾಕಿಕೊಂಡಿಲ್ಲ, ಈ ಬಗ್ಗೆ ನಾನು ಸ್ಪಷ್ಟವಾಗಿದ್ದೇನೆ. ನನ್ನ ಕ್ಷೇತ್ರದ ಜನತೆಗೆ ತೀರ್ಮಾನ ಬಿಟ್ಟಿದ್ದೇನೆ ಎಂದರು.

*NIA ಬಂಧನದಲ್ಲಿರುವ ಶಾಫಿ ಬೆಳ್ಳಾರೆಯನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ SDPI*

https://pragati.taskdun.com/vidhanasabha-electionsdpicandidatehafi-bellare/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button