ನೂತನ ಸಚಿವರ ಪಟ್ಟಿ ಸಿದ್ಧ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಈ ತಿಂಗಳಾಂತ್ಯದೊಳಗೆ ರಾಜ್ಯ ಸಚಿವ ಸಂಪುಟ ರಚನೆಯಾಗಲಿದೆ. ಈಗಾಗಲೇ ನೂತನ ಸಚಿವ ಪಟ್ಟಿಯನ್ನು ಸಿದ್ಧಗೊಳಿಸಿ ವರಿಷ್ಠರಿಗೆ ರವಾನಿಸಿರುವ ಸಿಎಂ ಬಿ ಎಸ್ ಯಡಿಯೂರಪ್ಪ, ವರಿಷ್ಠ ಸಮ್ಮತಿಗಾಗಿ ಕಾಯುತ್ತಿದ್ದಾರೆ.

ಈ ಬಾರಿ ಮುಖ್ಯಮಂತ್ರಿ ಬಿ.ಎಸ್​​. ಯಡಿಯೂರಪ್ಪ ದೆಹಲಿಗೆ ತೆರಳದೆ ಹೈಕಮಾಂಡ್​ ನಾಯಕರಿಗೆ ಕೇವಲ ಪಟ್ಟಿ ಕಳಿಸಿ ಇಲ್ಲಿಂದಲೇ ಸಂಪುಟ ವಿಸ್ತರಣೆ ಒಪ್ಪಿಗೆ ಪಡೆಯಲು ಮುಂದಾಗಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ವೇಳೆ 12 ಶಾಸಕರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ. ಈ ಪೈಕಿ 9 ಸಚಿವ ಸ್ಥಾನವನ್ನು ಕಾಂಗ್ರೆಸ್​​-ಜೆಡಿಎಸ್ ಪಕ್ಷದಿಂದ ಬಂದವರಿಗೆ ಹಾಗೂ ಉಳಿದ ಮೂರು ಸ್ಥಾನಗಳನ್ನು ಮೂಲ ಬಿಜೆಪಿ ನಾಯಕರಿಗೆ ನೀಡಲು ಬಿಎಸ್​ವೈ ಸಿದ್ಧತೆ ನಡೆಸಿದ್ದಾರೆ.

ಸಂಪುಟ ಸೇರಲಿರುವ ಅರ್ಹರು:
* ರಮೇಶ್‌ ಜಾರಕಿಹೊಳಿ
* ಬಿ.ಸಿ.ಪಾಟೀಲ್‌
* ಶಿವರಾಮ ಹೆಬ್ಬಾರ್‌
* ಆನಂದ್‌ ಸಿಂಗ್‌
* ಡಾ. ಕೆ.ಸುಧಾಕರ್‌
* ಎಸ್‌.ಟಿ.ಸೋಮಶೇಖರ್‌
* ಬೈರತಿ ಬಸವರಾಜು
* ಕೆ.ಗೋಪಾಲಯ್ಯ
* ನಾರಾಯಣ ಗೌಡ

ಸಂಪುಟ ಸೇರಲಿರುವ ಮೂಲ ಬಿಜೆಪಿಗರು:
* ಉಮೇಶ್‌ ಕತ್ತಿ
* ಅರವಿಂದ ಲಿಂಬಾವಳಿ
* ತಿಪ್ಪಾರೆಡ್ಡಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button