Belagavi NewsBelgaum NewsElection NewsKannada NewsKarnataka NewsPolitics

ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ(ಟ್ರಸ್ಟ್) ಬೆಳಗಾವಿ ೨೦೨೩ ನೆಯ ಸಾಲಿನ ವಿವಿಧ ಪುಸ್ತಕ ಪ್ರಶಸ್ತಿಗಳಿಗೆ ಕೃತಿಗಳನ್ನು ಆಹ್ವಾನಿಸಿದೆ.

ಲೇಖಕರು, ಸಾಹಿತಿಗಳು, ಕವಿಗಳು ಪ್ರಶಸ್ತಿಗೆ ತಮ್ಮ ೩ ಪ್ರತಿಗಳನ್ನು ನೀರಜಾ ಗಣಾಚಾರಿ ಕಾರ್ಯದರ್ಶಿಗಳು, ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ, ೨೫೫, ವಿಜಯಾ ರೆಸಿಡೆನ್ಸಿ ಎಫ್-೨ ಗುರುಪ್ರಸಾದ ಕಾಲೋನಿ, ಮುಖ್ಯ ರಸ್ತೆ, ಟಿಳಕವಾಡಿ, ಬೆಳಗಾವಿ ೫೯೦೦೦೬ ಈ ವಿಳಾಸಕ್ಕೆ ಕಳುಹಿಸಬೇಕು.

ಕೃತಿಗಳನ್ನು ಕಳುಹಿಸುವವರು ಬೆಳಗಾವಿ ಜಿಲ್ಲೆಯವರೇ ಆಗಿರಬೇಕು. ಪುಸ್ತಕಗಳು ೨೦೨೩ ನೇಯ ಸಾಲಿನಲ್ಲಿ ಪ್ರಕಟಗೊಂಡಿರಬೇಕು. ಕಳುಹಿಸುವವರು ತಮ್ಮ ಸಂಪೂರ್ಣ ವಿಳಾಸ, ಪಿನ್‌ಕೊಡ್ ಸಂಖ್ಯೆ, ಮೊಬೈಲ್ ಸಂಖ್ಯೆಯನ್ನು ತಪ್ಪದೇ ಬರೆದು ಜುಲೈ ೧೫ ರೊಳಗೆ ಕಳುಹಿಸಬೇಕು. ಹೆಚ್ಚಿನ ವಿವರಗಳಿಗಾಗಿ ೯೪೮೧೬೫೬೪೦೫, ೯೮೪೫೫೯೯೧೪೪ ೯೪೪೮೬೩೭೭೯೭ ಗಳಿಗೆ ಸಂಪರ್ಕಿಸ ಬಹುದಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button