Kannada NewsLatestNational

*ಕಾರು-ಟ್ರಕ್ ಭೀಕರ ಅಪಘಾತ: ಐವರು ಉದ್ಯಮಿಗಳು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ರಸ್ತೆ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿಹೊಡೆದ ಪರಿಣಾಮ ಕಾರಿನ ಅರ್ಧದಷ್ಟು ಭಾಗ ಟ್ರಕ್ ಒಳಗೆ ಹೊಕ್ಕಿದ್ದು, ಕಾರಿನಲ್ಲಿದ್ದ ಐವರು ಉದ್ಯಮಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಬಿಹಾರದ ಪಾಟ್ನಾ-ಗಯಾ-ದೋಭಿ ಚತುಷ್ಪಥ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಉದ್ಯಮಿಗಳಾದ ರಾಜೇಶ್ ಕುಮಾರ್ (55), ಸಂಜಯ್ ಸಿಂಗ್ (50), ಕಮಲ್ ಕಿಶೋರ್ (38) ಪ್ರಕಾಶ್ ಚೌರಾಸಿಯಾ (35) ಮತ್ತು ಸುನೀಲ್ ಕುಮಾರ್ (38) ಮೃತರು ಎಂದು ಗುರುತಿಸಲಾಗಿದೆ.

ಪರ್ಸಾ ಬಜಾರ್ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

Home add -Advt


Related Articles

Back to top button