Kannada NewsKarnataka NewsLatest

*ಚೈತ್ರಾ & ಗ್ಯಾಂಗ್ ಗೆ ಕೈದಿನಂಬರ್ ನೀಡಿದ ಜೈಲಾಧಿಕಾರಿಗಳು*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಎಂಎಲ್ ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ 5 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಚೈತ್ರಾ ಹಾಗೂ ಗ್ಯಾಂಗ್ ಗೆ ಕೈದಿ ನಂಬರ್ ನೀಡಲಾಗಿದೆ.

ಸಿಸಿಬಿ ಪೊಲೀಸ್ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ ಚೈತ್ರಾ ಸೇರಿದಂತೆ 7 ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಚೈತ್ರಾ ಹಾಗೂ ಗ್ಯಾಂಗ್ ನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಜೈಲಧಿಕಾರಿಗಳು ಆರೋಪಿಗಳಿಗೆ ಕೈದಿ ನಂಬರ್ ನೀಡಿದ್ದಾರೆ.

ಚೈತ್ರಾಗೆ 9737 ನಂಬರ್ ನೀಡಲಾಗಿದ್ದು, ಮೋಹನ್ ಕುಮಾರ್ ಗೆ ಕೈದಿ ನಂಬರ್ 9738, ರಮೇಶ್ 9739, ಚೆನ್ನಾನಾಯ್ಕ್ 9740, ಧನರಾಜ್ 9741 ನಂಬರ್ ನೀಡಲಾಗಿದೆ.

ಈ ನಡುವೆ ಚೈತ್ರಾ ಮುಂದೆ ಕುಂದಾಪುರ ಪದ ಬಳಕೆ ಮಾಡದಂತೆ ಕೋರ್ಟ್ ತಡೆಯಾಜ್ಞೆ ನೀಡಿದೆ.

Home add -Advt


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button