Kannada NewsKarnataka NewsLatest

ಶೇ.50 ಮಹಿಳಾ ಮೀಸಲಾತಿ, ಗ್ರಾಮ ಸಭೆಗಳಿಗೆ ಶಕ್ತಿ ತುಂಬುವ ಕೆಲಸಗಳನ್ನು ಮಾಡಿದ್ದೇ ಕಾಂಗ್ರೆಸ್ – ಚನ್ನರಾಜ ಹಟ್ಟಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸವದತ್ತಿ ತಾಲೂಕಿನ ಯರಜರ್ವಿ, ಕಡಬಿ, ಕೊಟೂರ, ತಲ್ಲೂರ ಗ್ರಾಮಗಳಲ್ಲಿ ಬೆಳಗಾವಿ ವಿಧಾನ ಪರಿಷತ್ ಚುನಾವಣೆಯ ಅಂಗವಾಗಿ​ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ​ ಮತಯಾಚಿಸಿದ​ರು​.
​ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಕೆಲಸ ಮಾಡುವ ಉತ್ಸಾಹದಿಂದ ಕಣಕ್ಕಿಳಿದಿದ್ದೇನೆ. ಕಾಂಗ್ರೆೆಸ್ ಸರಕಾರ ಜಾರಿಗೆ ತಂದಿರುವ ನರೇಗಾ ಯೋಜನೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಪಂಚಾಯಿತಿ ವ್ಯವಸ್ಥೆ ಉಳಿಯಲು ಅವಕಾಶವಾಗಿದೆ. ಶೇ.50 ಮಹಿಳಾ ಮೀಸಲಾತಿ, ಗ್ರಾಮ ಸಭೆಗಳಿಗೆ ಶಕ್ತಿ ತುಂಬುವ ಕೆಲಸಗಳನ್ನು ಮಾಡಿದ್ದೇ ಕಾಂಗ್ರೆಸ್. ಈ  ವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತೇನೆ. ಅದಕ್ಕಾಗಿ ನಿಮ್ಮ ಮೊದಲ ಪ್ರಾಶಸ್ತ್ಯದ ಮತವನ್ನು ನನಗೆ ನೀಡಿ ಎಂದು ಅವರು ವಿನಂತಿಸಿದರು. 
​  ಈ ಸಂದರ್ಭಗಳಲ್ಲಿ ಆಯಾ ಗ್ರಾಮ​ ಪಂಚಾಯಿತಿಗಳ​ ಜನಪ್ರತಿನಿಧಿಗಳು, ಮುಖಂಡರು, ವಿಶ್ವಾಸ್ ವೈದ್ಯ, ವಿಕ್ರಮ ದೇಸಾಯಿ, ವಿನಯ ದೇಸಾಯಿ, ಮಹಾಂತೇಶ ಉಪ್ಪಿನ, ಡಿ ಡಿ ಟೋಪೋಜಿ, ಮಹಾಂತೇಶಣ್ಣ ಮತ್ತಿಕೊಪ್ಪ, ನೀಲಕಂಠ ಸಿದ್ದಬಸನ್ನವರ, ಸುರೇಶಗೌಡ ಬಾಡಗಿಗೌಡರ, ಕಾಶೀಮ್ ಸಾಬ್ ಜಮಾದಾರ ಮುಂತಾದವರು ಉಪಸ್ಥಿತರಿದ್ದರು.

Related Articles

Back to top button