
ಪ್ರಗತಿವಾಹಿನಿ ಸುದ್ದಿ: ಕೃಷಿ ಹೊಂಡದಲ್ಲಿ ವಿದ್ಯುತ್ ಅವಘಡ ಉಂಟಾಗಿ ಮೂವರು ಯುವಕರು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಮೆಂತೆಕೆದಿರೇನಹಳ್ಳಿಯಲ್ಲಿ ನಡೆದಿದೆ
ಪಂಪ್ ಸೆಟ್ ರಿಪೇರಿಗೆಂದು ಹೋಗಿದ್ದಾಗ ಈ ದುರಂತ ಸಂಭವಿಸಿದೆ. ಶ್ರೀಕಾಂತ್, ಲೋಕೇಶ್, ರಮೇಶ್ ಮೃತ ಯುವಕರು. ಮೃತರು ಮೆಂತೆಕೇದಿರೇನಹಳ್ಳಿ ನಿವಾಸಿಗಳು. ಕೃಷಿ ಹೊಂಡದ ಪಂಪ್ ಸೆಟ್ ರಿಪೇರಿಗೆಂದು ಹೋಗಿದ್ದಾಗ ಕರೆಂಟ್ ಶಾಕ್ ಹೊಡೆದು ಸವನ್ನಪ್ಪಿದ್ದಾರೆ.
ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.