Belagavi NewsBelgaum NewsKannada NewsKarnataka NewsNationalPolitics

*ಸಭೆಗೂ ಮುಂಚೆ ಅಭಯ ಪಾಟೀಲ್ ಮನೆಗೆ ಕಾಂಗ್ರೆಸ್ ನಗರ ಸೇವಕರು*

ಪ್ರಗತಿವಾಹಿನಿ ಸುದ್ದಿ ಬೆಳಗಾವಿ: ಭೂ ಪರಿಹಾರಕ್ಕೆ ಸಂಬಂಧಿಸಿದಂತೆ 20 ಕೋಟಿ ರೂ ಪರಿಹಾರ ಕೊಡುವ ವಿಷಯದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸುತ್ತಿರುವ ಮಹಾನಗರ ಪಾಲಿಕೆಯ  ವಿಶೇಷ ಸಭೆ ನಡೆಯುತ್ತಿದೆ

ಆದರೆ ಸಭೆಗೆ ಮುಂಚೆ ಕಾಂಗ್ರೆಸ್ ನಗರ ಸೇವಕರು ಬಿಜೆಪಿ ಶಾಸಕ ಅಭಯ ಪಾಟೀಲ್ ಮನೆಗೆ ಹೋಗಿ ಚರ್ಚೆ ನಡೆಸಿದ್ದಾರೆ.‌ ಆದರೆ ಏನು ಚರ್ಚೆ ಮಾಡಿದ್ದಾರೆ ಎಂದು ತಿಳಿದು ಬಂದಿಲ್ಲ. ಒಂದು ಕಡೆ ಕಾಂಗ್ರೆಸ್ ನಗರವಸೇವಕರು ಬಿಜೆಪಿ ಶಾಸಕನ ಮನೆಗೆ ಹೊದರೆ ಇತ್ತ ಮೇಯರ್ ಕಚೇರಿಯಲ್ಲಿ ಎಲ್ಲಾ ಬಿಜೆಪಿ ನಗರ ಸೇವಕರು ಗುಪ್ತವಾಗಿ ಸಭೆ ನಡೆಸುತ್ತಿದ್ದಾರೆ.‌

ಈ ಸಭೆಯಲ್ಲಿ ಯಾವ ತೀರ್ಮಾನ ಕೈಗೊಳ್ಳಲಾಗುತ್ತದೆ ಎನ್ನುವ ಬಹುದೊಡ್ಡ  ಪ್ರಶ್ನೆ ಬೆಳಗಾವಿಗರನ್ನು ಕಾಡುತ್ತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button