Karnataka News

*ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್*

ಪ್ರಗತಿವಾಹಿನಿ ಸುದ್ದಿ: ಬೀದರ್ ನಲ್ಲಿ ಗುತ್ತಿಗೆದಾರ ಸಚಿನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ಬಿಜೆಪಿ ನಾಯಕರು ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತಿದ್ದಾರೆ. ಈ ನಡುವೆ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

Home add -Advt

ಆತ್ಮಹತ್ಯೆಗೆ ಶರಣಾಗಿರುವ ಸಚಿನ್ ಗುತ್ತಿಗೆದಾರರನೇ ಅಲ್ಲ ಎಂದು ಹೇಳಲಾಗುತ್ತಿದೆ. ಸಚಿನ್ ಪಂಚಾಳ್ ಗುತ್ತಿಗೆದಾರ ಎಂದು ಎಲ್ಲೂ ಹೆಸರಿಲ್ಲ. ಎಲ್ಲೂ ನೋಂದಣಿ ಕೂಡ ಆಗಿಲ್ಲ. ಆತನ ಹೆಸರಲ್ಲಿ ಗುತ್ತಿಗೆದಾರ ಎಂದು ಯವೌದೇ ಲೈಸನ್ಸ್ ಕೂಡ ಇಲ್ಲ ಎಂದು ತಿಳಿದುಬಂದಿದೆ.

ಈ ಬಗ್ಗೆ ಗುತ್ತಿಗೆದಾರರಸಂಘದ ಅಧ್ಯಕ್ಷ ಜಗನ್ನಾಥ್ ಮಾಹಿತಿ ನೀಡಿದ್ದು, ಸಚಿನ್ ಗುತ್ತಿಗೆದರನೇ ಅಲ್ಲ. ಆತನ ಬಳಿ ಲೈಸನ್ಸ್ ಇಲ್ಲ ಈ ಬಗ್ಗೆ ಬೀದರ್ ಗುತ್ತಿಗೆರಾರ ಸಂಘದ ಅಧ್ಯಕ್ಷರಿಂದಲೂ ಮಾಹಿತಿ ಪಡೆದಿದ್ದೇನೆ ಎಂದು ತಿಳಿಸಿದ್ದಾರೆ.

ಗುತ್ತಿಗೆದಾರ ಆತ್ಮಹತ್ಯೆ ಕೇಸ್ ಸಂಬಂಧ ಧನ್ನೂರು ಪೊಲೀಸ್ ಠಾಣೆ ಪಿಎಸ್ ಐ ವಿಶ್ವಾರಾಧ್ಯ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

Related Articles

Back to top button