
https://youtu.be/fpUPE9vPqYE
https://youtu.be/kFgBF1ACIn4
https://youtu.be/Z1_Y4DV811s
https://youtu.be/poO1On546lI
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಕೊರೋನಾದಿಂದಾಗಿ ಮಾರುಕಟ್ಟೆಯಿಲ್ಲದೆ ರೈತರು ಬೆಳೆದ ಬೆಳಗಳನ್ನೆಲ್ಲ ಹೊಲದಲ್ಲೇ ನಾಶಮಾಡುವ ಸ್ಥಿತಿ ಉಂಟಾಗಿದೆ.
ರಾಯಬಾಗ ತಾಲೂಕಿನ ಖೆಮಲಾಪುರ ಗ್ರಾಮದಲ್ಲಿ ಸುಮಾರು 10 ಲಕ್ಷ ರೂ. ಮೌಲ್ಯದ ಕಲ್ಲಂಗಡಿ ಹಣ್ಣನ್ನು ಮಾರುಕಟ್ಟೆಗೆ ಸಾಗಿಸಲಾಗದೆ ನಾಶಪಡಿಸಲಾಗಿದೆ.

40 ಟನ್ ಕಲ್ಲಂಗಡಿಗಳನ್ನು ಊರಿಗೆಲ್ಲ ಉಚಿತವಾಗಿ ಹಂಚಿದ್ದಾರೆ. ಇನ್ನೂ 30 ಟನ್ ಕಲ್ಲಂಗಡಿ ಜಮೀನಿನಲ್ಲಿ ಉಳಿದಿದೆ.

ಕೃಷಿ ಯಲ್ಲೆ ಏನಾದರೂ ಸಾಧಿಸಬೇಕೆಂದು ಲಕ್ಷಾಂತರ ರೂ ಸಾಲ ಮಾಡಿ ತನ್ನ ಮೂರು ಎಕರೆಯಲ್ಲಿ ಕಲ್ಲಂಗಡಿ ಹಾಗೂ ಎರಡು ಎಕರೆ ಕುಂಬಳಕಾಯಿ ಹಾಗೂ ಹಿರೆಕಾಯಿ ಬೆಳೆ ಬೆಳೆದಿದ್ದಾರೆ. ಕಲ್ಲಂಗಡಿ ಬೆಳೆ ಫಲವತ್ತಾಗಿ ಬೆಳೆದು ಸುಮಾರು 80 -90 ಟನ್ ಕಾಯಿ ಬಂದಿದೆ. ಕೊರೊನಾ ಎಫೆಕ್ಟ್ ನಿಂದ ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ಸಾಗಾಟ ಮತ್ತು ಮಾರುಕಟ್ಟೆ ಇಲ್ಲದೆ ರೈತ ಕಂಗಾಲಾಗಿದ್ದಾನೆ.
ಹಣ್ಣು ನಾಶ ವಾಗಬಾರದೆಂದು ಸುತ್ತ ಮುತ್ತ ಗ್ರಾಮಸ್ಥರಿಗೆ ಉಚಿವಾಗಿ ಕೊಟ್ಟಿದ್ದಾರೆ. ಅಲ್ಲದೆ ಉಳಿದ ಸುಮಾರು 40-50 ಟನ್ ಹಣ್ಣನ್ನು ನೆಲಕ್ಕೆ ಎಸೆದು ಒಡೆದು ನಾಶ ಪಡಿಸುತ್ತಿದ್ದಾರೆ. 10-12 ಲಕ್ಷ ರೂಪಾಯಿ ನಷ್ಟ ಅನುಭವಿಸಿದ್ದಾರೆ.
ಸರಕಾರವೇ ಹೊಲಕ್ಕೆ ಬಂದು ಖರೀದಿಸುವ ವ್ಯವಸ್ಥೆಯಾಗಬೇಕು. ನಾಶವಾದ ಬೆಳೆಗೆ ಪರಿಹಾರ ನೀಡಬೇಕು ಎನ್ನುವುದು ರೈತರ ಆಗ್ರಹವಾಗಿದೆ.