Latest

ಕೊವಿಡ್ ಉಸ್ತುವಾರಿಗಾಗಿ ಸಚಿವರ ನಡುವೆ ಫೈಟ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ನಡುವೆ ಕೊವಿಡ್ ಉಸ್ತುವಾರಿಗಾಗಿ ಇಬ್ಬರು ಸಚಿವರ ನಡುವೆ ಬಿಗ್ ಫೈಟ್ ಮುಂದುವರೆದಿದೆ.

ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಬಿ ಎಸ್ ಯಡಿಯೂರಪ್ಪ ಕೊವೀಡ್ ಜವಾಬ್ದಾರಿಯನ್ನು ಕಂದಾಯ ಸಚಿವ ಆರ್ ಅಶೋಕ್​​ಗೆ ವಹಿಸಿದ್ದರು. ಆರ್​​. ಅಶೋಕ್​ಗೂ ಮುನ್ನ ಶಿಕ್ಷಣ ಸಚಿವ ಸುರೇಶ್ ಕುಮಾರ್​​ಗೆ ಜವಾಬ್ದಾರಿ ವಹಿಸಲಾಗಿತ್ತು. ಆದರೆ ಸುರೇಶ್ ಕುಮಾರ್​​ಗೆ ಎಸ್​​​ಎಸ್​ಎಲ್​​ಸಿ ಪರೀಕ್ಷೆ ನೋಡಿಕೊಳ್ಳಬೇಕಿದ್ದರಿಂದ ಅವರ ಬದಲು ಅಶೋಕ್​​ಗೆ ಜವಾಬ್ದಾರಿ ಕೊಡಲಾಗಿತ್ತು. ಇದೀಗ ಆರ್​​ ಅಶೋಕ್​​ಗೆ ಜವಾಬ್ದಾರಿ ಕೊಡುತ್ತಿದ್ದಂತೆಯೇ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ ತಾನೇ ಬೆಂಗಳೂರು ಕೊವೀಡ್-19 ಉಸ್ತುವಾರಿ ಎಂದು ಬಿಂಬಿಸಿಕೊಂಡಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಸುಧಾಕರ್​​, ಇಂತಹ​ ಕೊರೋನಾ ಬಿಕ್ಕಟ್ಟು ಉಂಟಾಗಿರುವ ಪರಿಸ್ಥಿಯಲ್ಲಿ ಬೆಂಗಳೂರು ನಗರದ ಕೊವೀಡ್ ಉಸ್ತುವಾರಿಯಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ರಾಜ್ಯದ ಜನತೆ ಕೆಲಸ ಮಾಡಲು ಸಿಕ್ಕಿದ ಅವಕಾಶಕ್ಕೆ ಧನ್ಯವಾದಗಳು. ಕೊರೋನಾ ನಿರ್ವಹಣೆಯಲ್ಲಿ ಸಿಎಂ ನೇತೃತ್ವದ ತಂಡದಲ್ಲಿ ದೇಶವೇ ಮೆಚ್ಚುವಂತ ಪ್ರಾಮಾಣಿಕ ಕಾರ್ಯ ಮಾಡಿದ್ದಕ್ಕೆ ಹೆಮ್ಮೆಯಿದೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಕಂದಾಯ ಸಚಿವರಿಗೆ ಠಕ್ಕರ್ ನೀಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button