Kannada NewsKarnataka NewsLatest

ಕೃಷ್ಣಾ ತೀರದಲ್ಲಿ ಜೋಡಿ (?) ಶವ ಪತ್ತೆ

ಕೃಷ್ಣಾ ತೀರದಲ್ಲಿ ಜೋಡಿ (?) ಶವ ಪತ್ತೆ

ಪ್ರಗತಿವಾಹಿನಿ ಸುದ್ದಿ, ಮಾಂಜರಿ –

ಕೃಷ್ಣಾ ನದಿ ಪ್ರವಾಹ ಇಳಿಯುತ್ತಿದ್ದಂತೆ ನದಿ ತೀರದ ಗ್ರಾಮಸ್ಥರಿಗೆ ಶಾಕ್ ಉಂಟಾಗಿದೆ. ಚಿಕ್ಕೋಡಿ ತಾಲೂಕಿನ ಯಡೂರಿನ ನದಿ ತೀರದಲ್ಲಿ 2 ಅಪರಿಚಿತ ಶವಗಳು ಪತ್ತೆಯಾಗಿವೆ.

ಗುರುವಾರ ಸಾಯಂಕಾಲ ಕೃಷ್ಣಾನದಿಯ ತೀರದ ಯಡೂರಟೇಕ್ ವ್ಯಾಪ್ತಿಯಲ್ಲಿ ಅಂದಾಜು 40 ವಯಸ್ಸಿನ ಒಂದು ಗಂಡು ಮತ್ತು ಒಂದು ಹೆಣ್ಣಿನ ಶವಪತ್ತೆಯಾಗಿವೆ.
ಶವಗಳು ಯಾರದ್ದು ಎನ್ನುವುದು ಇನ್ನೂ ಪತ್ತೆಯಾಗಿಲ್ಲ.
ಇತ್ತೀಚಿಗೆ ಕೃಷ್ಣಾನದಿಯ ಮಹಾಪ್ರವಾಹದ ಪರಿಸ್ಥಿತಿಯ ಶಾಕ್ ನಿಂದ ಚೇತರಿಸಿಕೊಳ್ಳುವ ಮುನ್ನ    ಈ ಅವಘಡ ಪತ್ತೆಯಾಗಿದೆ. ಇದು ನದಿ ತೀರದ ಜನರಲ್ಲಿ ಆತಂಕವನ್ನು ಮೂಡಿಸಿದೆ‌.
ಅಂಕಲಿ ಪಿ ಎಸ್ ಐ ಗಣಪತಿ ಕೂಗನ್ನೋಳ್ಳಿ ಸ್ಥಳಕ್ಕೆ ಭೆಟಿ ನೀಡಿ ಪ್ರಕರಣ ಖಿಲಿಸಿಕೊಂಡಿದ್ದಾರೆ.
ಪಿ ಡಿ ಓ ಪ್ರಭು ಚೆನ್ನೂರ, ಸ್ಥಳಿಯ ಗ್ರಾ ಪಂ ಸದಸ್ಯರ ನೇತೃತ್ವದಲ್ಲಿ ಪಂಚನಾಮೆ ಮಾಡಿ ಶವಸಂಸ್ಕಾರವನ್ನು ಮಾಡಲಾಗಿದೆ.

 

(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲರಿಗೂ ಶೇರ್ ಮಾಡಿ)

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button