Kannada NewsKarnataka NewsLatest

ಸಚಿವ ಡಿಕೆಶಿ, ಶಿವಶಂಕರ ರೆಡ್ಡಿ ನಾಳೆ ಬೆಳಗಾವಿಗೆ

ಜಲಸಂಪನ್ಮೂಲ ಸಚಿವರ ಜಿಲ್ಲಾ ಪ್ರವಾಸ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

Home add -Advt

ರಾಜ್ಯ ಜಲಸಂಪನ್ಮೂಲ ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ  ಡಿ.ಕೆ.ಶಿವಕುಮಾರ್ ಅವರು ಜೂನ್ ೨೨ ರಂದು ಬೆಳಗಾವಿ ಜಿಲ್ಲೆಗೆ ಭೇಟಿ ನೀಡಿ ವಿವಿಧ ಬ್ಯಾರೇಜ್‌ಗಳ ಪರಿಶೀಲನೆ ನಡೆಸಲಿದ್ದಾರೆ.
ಜೂನ್ ೨೨ ರಂದು ಮಧ್ಯಾಹ್ನ ೧೨ ಗಂಟೆಗೆ ಚಿಕ್ಕೋಡಿಗೆ ಆಗಮಿಸುವರು. ಮಧ್ಯಾಹ್ನ ೧ ರಂದು ರಾಜಾಪುರ ಬ್ಯಾರೇಜ್, ೧-೩೦ ಗಂಟೆಗೆ ಕಲ್ಲೋಲ್ ಬ್ಯಾರೇಜ್, ೨ ಗಂಟೆಗೆ ಮಂಜರಿ ಬ್ಯಾರೇಜ್, ೨-೩೦ ಗಂಟೆಗೆ ಉಗರ್ ಬ್ಯಾರೇಜ್ ಹಾಗೂ ೩-೩೦ ಗಂಟೆಗೆ ಹಿಪ್ಪರಗಿ ಬ್ಯಾರೇಜ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿ, ೬-೩೦ ಗಂಟೆಗೆ ಬೆಳಗಾವಿ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.

ಕೃಷಿ ಸಚಿವ:

ರಾಜ್ಯ ಕೃಷಿ ಸಚಿವ  ಎನ್. ಹೆಚ್.ಶಿವಶಂಕರ ರೆಡ್ಡಿ ಜೂನ್ ೨೨ ರಂದು ಮುಂಜಾನೆ ೧೧-೧೫ ಗಂಟೆಗೆ ರಾಮದುರ್ಗ ಅತಿಥಿ ಗೃಹಕ್ಕೆ ಆಗಮಿಸುವರು. ೧೧-೪೫ಕ್ಕೆ  ಹೇಮರೆಡ್ಡಿ ಮಲ್ಲಮನ ನೂತನ ದೇವಸ್ಥಾನ ಉದ್ಘಾಟನೆ ಕಳಸಾರೋಹಣ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸುವರು.
ಮಧ್ಯಾಹ್ನ ೨-೩೦ ಗಂಟೆಗೆ ರಾಮದುರ್ಗ ಸರ್ಕಾರಿ ಅತಿಥಿ ಗೃಹದಲ್ಲಿ ಪತ್ರಿಕಾಗೋಷ್ಠಿ ನಡೆಸುವರು. ನಂತರ ಮಧ್ಯಾಹ್ನ ೩ ಗಂಟೆಗೆ ಯರಗಟ್ಟಿಗೆ ಆಗಮಿಸುವರು. ೩-೩೦ ಗಂಟೆಗೆ ಕೃಷಿ ಯಂತ್ರಧಾರೆ ಯೋಜನೆಯಡಿ ಬಾಡಿಗೆ ಆಧಾರಿತ ಸೇವಾ ಕೇಂದ್ರಕ್ಕೆ ಭೇಟಿ ನೀಡುವರು.
ಸಂಜೆ ೪-೩೦ ಗಂಟೆಗೆ ಕಡಬಿ ಗ್ರಾಮದಲ್ಲಿ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕೈಗೊಂಡ ರೈತನ ಕ್ಷೇತ್ರಕ್ಕೆ ಭೇಟಿ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಸಂಜೆ ೬-೦೫ ಗಂಟೆಗೆ ಬೆಳಗಾವಿ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.

 

Related Articles

Back to top button