Kannada NewsKarnataka NewsLatest

*ಕುಡಿದ ನಶೆಯಲ್ಲಿ ಶಿವಾಜಿ ಮೂರ್ತಿ ಕಾಲಿನ ಕಡಗ ಕೀಳಲು ಹೋದ ವ್ಯಕ್ತಿ; ಕುಡುಕನ ರಾದ್ಧಾಂತಕ್ಕೆ ಸಾರ್ವಜನಿಕರಿಂದ ಬಿತ್ತು ಗೂಸ*

ಪ್ರಗತಿವಾಹಿನಿ ಸುದ್ದಿ; ದಾಂಡೇಲಿ: ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಬಂಗಾರ ಎಂದು ಶಿವಾಜಿ ಮೂರ್ತಿಯ ಕಾಲಿನ ಬಂಗಾರದ ಬಣ್ಣದ ಕಡಗವನ್ನು ರಾಡ್ ನಿಂದ ಹೊಡೆದು ಕೀಳಲು ಹೋಗಿ ಹಾನಿ ಮಾಡಿ ಜನರಿಂದ ಗೂಸ ತಿಂದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಸೋಮಾನಿ ವೃತ್ತದಲ್ಲಿ ನಡೆದಿದೆ.

ದಾಂಡೇಲಿ ಟೌನ್ ಶಿಪ್ ನ ಪ್ಯಾರಸಿಂಗ್ ರಜಪೂತ್ ಜನರಿಂದ ಥಳಿಸಲ್ಪಟ್ಟ ವ್ಯಕ್ತಿ. ಕಂಠಪೂರ್ತಿ ಕುಡಿದು ಶಿವಾಜಿ ಮೂರ್ತಿಯ ಸರ್ಕಲ್ ನಲ್ಲಿ ಪುತ್ತಳಿ ಇದ್ದ ಸ್ಥಳವೇರಿ ಶಿವಾಜಿ ಮೂರ್ತಿಯ ಕಾಲಿಗೆ ಹಾಕಿದ್ದ ಕಡಗ ಬಂಗಾರದ ಬಣ್ಣ ಇದ್ದಿದ್ದರಿಂದ ಕಬ್ಬಿಣದ ಸಲಾಕೆ ಹಿಡಿದು ಕೀಳಲು ಹೋಗಿದ್ದಾನೆ. ಈತ ಮಾಡಿದ ಎಡವಟ್ಟಿಗೆ ಶಿವಾಜಿ ಮೂರ್ತಿ ಕಾಲಿಗೆ ಸ್ವಲ್ಪ ಹಾನಿಯಾಗಿದೆ. ಈ ಕುರಿತು ದಾಂಡೇಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button