Cancer Hospital 2
Beereshwara 36
LaxmiTai 5

*ಗ್ರಾಮ‌ ಪಂಚಾಯಿತಗಳಲ್ಲಿ ಕಡ್ಡಾಯವಾಗಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಲು ಡಿಸಿ ನಿತೇಶ್ ಪಾಟೀಲ ಸೂಚನೆ*

Anvekar 3
GIT add 2024-1

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಅಧಿಕ ಮಳೆಯಿಂದಾಗಿ ಸಂಭವನೀಯ ಪ್ರವಾಹ ಪರಿಸ್ಥಿತಿ ಎದುರಾದಲ್ಲಿ‌ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ‌‌ ಕುರಿತು ಗ್ರಾಮ‌ ಪಂಚಾಯತಗಳಲ್ಲಿ ಪ್ರತಿ‌ ಮಾಹೆ ಕಡ್ಡಾಯವಾಗಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಜರುಗಿಸುವಂತೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ‌ ಅವರು ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ‌ ಕಚೇರಿಯ ಸಭಾಂಗಣದಲ್ಲಿ ಸೋಮವಾರ (ಜೂ.24) ಜರುಗಿದ ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು‌ ಮಾತನಾಡಿದರು.

ಪ್ರವಾಹ ಪರಿಸ್ಥಿತಿಯನ್ನು‌ ಸಮರ್ಪಕವಾಗಿ ನಿರ್ವಹಿಸಲು ಗ್ರಾಮ‌ ಪಂಚಾಯತ‌ ಮಟ್ಟದಲ್ಲಿ ಈಗಾಗಲೇ ರಚಿಸಲಾದಂತಹ ಟಾಸ್ಕ ಪೋರ್ಸ ಸಮಿತಿಗಳು ಕಡ್ಡಾಯವಾಗಿ ಸಭೆಗಳನ್ನು ಜರುಗಿಸಿ ಸಭೆಯ ನಡಾವಳಿಗಳನ್ನು ತಪ್ಪದೇ ಜಿಲ್ಲಾಧಿಕಾರಿಗಳ‌ ಕಚೇರಿಗೆ ಕಳುಸಹಿಸುವಂತೆ ತಿಳಿಸಿದರು.

ಈಗಾಗಲೇ‌ ಗುರುತಿಸಲಾದ ಪ್ರವಾಹ‌ಕ್ಕೆ  ತುತ್ತಾಗಬಹುದಾದ ಗ್ರಾಮ‌ ಪಂಚಾಯತಗಳು ಪ್ರತಿ ಹದಿನೈದು ದಿನಗಳಿಗೊಮ್ಮೆ ಸಭೆ ಜರುಗಿಸಬೇಕು. 

ಪ್ರವಾಹ ಸಂದರ್ಭದಲ್ಲಿ ಗ್ರಾಮ‌ ಪಂಚಾಯತಗಳ‌ ಪಾತ್ರ ಅತೀ‌ ಪ್ರಮುಖವಾಗಿದ್ದು ಈ ನಿಟ್ಟಿನಲ್ಲಿ‌  ವಿಪತ್ತು ನಿರ್ವಹಣಾ ಸಭೆಗಳನ್ನು ಕಡ್ಡಾಯವಾಗಿ  ಜರುಗಿಸಬೇಕು ಎಂದರು.

ಜಿಲ್ಲೆಯ ನಗರ, ಸ್ಥಳೀಯ-ಸಂಸ್ಥೆ ಹಾಗೂ ಗ್ರಾಮ‌ ಪಂಚಾಯತಗಳಲ್ಲಿ ಗುರುತಿಸಲಾದ ಪರಿಹಾರ ಕೇಂದ್ರಗಳಿಗೆ ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡಿ ಪರಿಹಾರ ಕೇಂದ್ರಗಳಲ್ಲಿನ ಸೌಲಭ್ಯಗಳ ಕುರಿತು ಪರಿಶೀಲಿಸಿ ಸಂಪೂರ್ಣ ವಿವರವನ್ನು ಛಾಯಾಚಿತ್ರಗಳೊಂದಿಗೆ ಒದಗಿಸಬೇಕು.‌ ಇದರ ಜೊತೆಗೆ ಗೋಶಾಲೆಗಳ ವಿವರವನ್ನು ಒದಿಗಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

Emergency Service

ಪ್ರವಾಹ ಸಂದರ್ಭದಲ್ಲಿ ಉದ್ಭವಿಸಬಹುದಾದ ಸಾಂಕ್ರಾಮಿಕ ರೋಗಗಳ‌ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯಿಂದ ಅಗತ್ಯವಿರುವ ಔಷಧಿಗಳನ್ನು ಈಗಿನಿಂದಲೇ ದಾಸ್ತಾನು‌ ಮಾಡಿಟ್ಟುಕೊಳ್ಳುವದರ ಜೊತೆಗೆ ವಿಷ ಜಂತುಗಳ ಕಡಿತದಿಂದಾಗುವ ಸಾವು‌ ನೋವು ತಪ್ಪಿಸಲು ಬೇಕಾದಂತಹ ಔಷಧಿಗಳನ್ನು ತಪ್ಪದೇ ದಾಸ್ತಾನು‌ ಮಾಡಿಟ್ಟುಕೊಳ್ಳಬೇಕು. 

ಪ್ರವಾಹ ಪರಿಸ್ಥಿತಿ ಸಮರ್ಪಕವಾಗಿ ನಿರ್ವಹಿಸಲು ನೋಡೆಲ‌ ಅಧಿಕಾರಿಗಳನ್ನು‌ ನೇಮಿಸಲಾಗಿದ್ದು, ಎಲ್ಲ ನೋಡೆಲ್‌ ಅಧಿಕಾರಿಗಳು ಸಮನ್ವಯದೊಂದಿಗೆ ‌ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.

ಸಹಾಯವಾಣಿ ಕೇಂದ್ರ ಆರಂಭಿಸಲು ಸೂಚನೆ

ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ಪ್ರಾರಂಭಿಸಬೇಕು. ಸಹಾಯವಾಣಿ ಕೇಂದ್ರಗಳಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆ ಕಾರ್ಯ ನಿರ್ವಹಣೆಗಾಗಿ  ಇತರೆ ಇಲಾಖೆಗಳ ಸಿಬ್ಬಂದಿಗಳನ್ನು ಪಾಳಿ ಪ್ರಕಾರ ನಿಯೋಜಿಸಲು ತಿಳಿಸಿದರು.

ಬೆಳಗಾವಿ ನಗರದಲ್ಲಿ‌ ಪ್ರತಿ ವಾರ್ಡಗಳಿಗೆ ಹತ್ತು ಜನರ ತಂಡವನ್ನು ರಚಿಸಿ ಅವರ ಸಂಪರ್ಕ ವಿವರಗಳನ್ನು ಪ್ರಚಾರ ಗೊಳಿಸುವದರ  ಜೊತೆಗೆ ನಗರದಲ್ಲಿನ ಚರಂಡಿಗಳನ್ನು ಸ್ಬಚ್ಚಗೊಳಿಸಲು ಕ್ರಮ‌ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ‌ ನಿತೇಶ್ ಪಾಟೀಲ ಸೂಚನೆ ನೀಡಿದರು.

ಜಿಲ್ಲಾ‌ ಪೋಲಿಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಅವರು‌ ಮಾತನಾಡಿ, ಮುಂದಿನ ದಿನಗಳಲ್ಲಿ ಗ್ರಾಮ‌ ಪಂಚಾಯತಗಳಲ್ಲಿ ಟಾಸ್ಕ ಪೋರ್ಸ ಸಮಿತಿ ಸಭೆಗಳನ್ನು ಜರುಗಿಸುವುದರ ಜೊತೆಗೆ ನದಿ‌ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಸಂದರ್ಭದಲ್ಲಿ ಕೈಗೊಳ್ಳಬೇಕಾದ ರಕ್ಷಣಾ‌ ಕ್ರಮಗಳ ಕುರಿತು ಕೇಂದ್ರ ಹಾಗೂ ರಾಜ್ಯ ವಿಪತ್ತು‌ ನಿರ್ವಹಣಾ ತಂಡಗಳಿಂದ ಪ್ರಾತ್ಯಕ್ಷಿಕೆ ನೀಡಲು ಕ್ರಮ ಕೈಗೊಳ್ಳಲು ತಿಳಿಸಿದರು. 

ಸಭೆಯಲ್ಲಿ ಜಿಲ್ಲಾ‌ಪಂಚಾಯತ ಸಿ.ಇ.ಓ ರಾಹುಲ್ ಶಿಂಧೆ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಬೆಳಗಾವಿ ಮಹಾನಗರ‌ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಸೇರಿದಂತೆ‌‌ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Bottom Add3
Bottom Ad 2