Kannada NewsKarnataka NewsLatest

ಧೀಮಂತ ನಾಯಕ ಪಂಡಿತ್ ದೀನ ದಯಾಳ್ ಉಪಾಧ್ಯಾಯರ 105 ನೇ ಜನ್ಮದಿನ ಆಚರಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಭಾರತದ ಅಖಂಡತೆ ಮತ್ತು ಹಿಂದೂತ್ವದ ಪುನರುತ್ಥಾಣಕ್ಕಾಗಿ   ಜೀವನವನ್ನೇ ಮುಡಿಪಾಗಿಟ್ಟ ಧೀಮಂತ ನಾಯಕ ಪಂಡಿತ್ ದೀನ ದಯಾಳ್ ಉಪಾಧ್ಯಾಯರ ಅವರ ೧೦೫ ನೇ ಜನ್ಮದಿನವನ್ನು ನಗರದ ಲೋಕಮಾನ್ಯ ತಿಲಕ್ ಚೌಕ್, ವಾರ್ಡ್ ನಂಬರ್ 04 ರಲ್ಲಿ ಬಿಜೆಪಿ ರಾಜ್ಯ ಒಬಿಸಿ ಮೋರ್ಚಾ ಕಾರ್ಯದರ್ಶಿ ಕಿರಣ ಜಾಧವ ನೇತೃತ್ವದಲ್ಲಿ  ಆಚರಿಸಲಾಯಿತು.
ನಗರದ ವಾರ್ಡ್ ನಂ 04 ಕಾರ್ಪೊರೇಟರ್  ಜಯತೀರ್ಥ ಸೌದತ್ತಿ, ಮಹಾನಗರ ಸಹ ಪ್ರಭಾರಿ ರಮೇಶ್ ದೇಶಪಾಂಡೆ, ವಿಕ್ರಮ್ ರಾಜಪುರೋಹಿತ್,  ಕಿರಣ್ ಕಲ್ಕುಪ್ಪಿ,  ಶೀತಲ್ ಚಿಕ್ಕಣ್ಣವರ್, ರಘು ಪಾಟೀಲ್, ಲೋಕಮಾನ್ಯ ಆಟೋ ಅಸೋಸಿಯೇಶನ್ ಮತ್ತು ಇತರ ಬಿಜೆಪಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಉಪಸ್ಥಿತಿಯಲ್ಲಿ  ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮ ಆಚರಣೆ ಮಾಡಲಾಯಿತು .
ಈ ಸಂದರ್ಭದಲ್ಲಿ ಬಿಜೆಪಿ ಕರ್ನಾಟಕ ರಾಜ್ಯ ಒಬಿಸಿ ಮೋರ್ಚಾ ಕಾರ್ಯದರ್ಶಿ ಕಿರಣ್ ಜಾಧವ್ ಅವರು ಮಾತನಾಡಿ ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮ ದಿನದ ಕುರಿತು ಸಮಗ್ರ ಮಾನವತಾವಾದ ಮತ್ತು ಅಂತ್ಯೋದಯದ ಕಲ್ಪನೆಗಳೊಂದಿಗೆ, ಅವರು ರಾಷ್ಟ್ರಕ್ಕೆ ಪ್ರಗತಿಪರ ಸಿದ್ಧಾಂತವನ್ನು ನೀಡಿದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಲವು ಹಿರಿಯ ನಾಯಕರು ಮತ್ತು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button