Kannada NewsKarnataka NewsLatest

2 ಗಂಟೆ ಒದ್ದಾಡಿ ಜೀವಬಿಟ್ಟ ಕಾಡಿನ ಸುಂದರಿ – ಮನಕಲಕುವ ವೀಡಿಯೋ

ಜಿಂಕೆ ಜೀವಬಿಟ್ಟ ಮೇಲೆ ಬಂದ ಕಾಕತಿ ಅರಣ್ಯ ಇಲಾಖೆ ಸಿಬ್ಬಂದಿ

ಪ್ರಗತಿವಾಹಿನಿ ಸುದ್ದಿ,  ಅಗಸಗಿ :
ಬೆಳಗಾವಿ ಹೊರವಲಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ದ ವರ್ತುಳದ ಹತ್ತಿರ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ವನದಿಂದ ಮತ್ತೊಂದು ವನಕ್ಕೆ ಹೋಗಲು ರಸ್ತೆ ದಾಟುವಾಗ ರಭಸದಿಂದ ಬಂದ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡ ಜಿಂಕೆ ಸುಮಾರು ಎರಡು ಗಂಟೆಗಳ ಕಾಲ ವಿಲಿವಿಲಿ ಒದ್ದಾಡಿ ಪ್ರಾಣ ಬಿಟ್ಟಿದೆ.
ಸ್ಥಳೀಯರು ನೀರು ಹಾಕಿ ಪ್ರಾಣ ಉಳಿಸಲು ಹರಸಾಹಸ ಪಟ್ಟರೂ ಬದುಕುಳಿಯದ ಜಿಂಕೆಯನ್ನು ದಾರಿಹೋಕರು ನೋಡಿ ಮರಗುತ್ತಿದ್ದರು.
ಎರಡು ಗಂಟೆಗಳ ನಂತರ ಜಿಂಕೆ ಪ್ರಾಣ ಬಿಟ್ಟ ನಂತರ ಅರಣ್ಯ ಅಧಿಕಾರಿಗಳು ಆಗಮಿಸಿದ್ದು, ಈ ಘಟನೆ ಬಗ್ಗೆ ಪರಿಶೀಲಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Related Articles

Back to top button