Kannada NewsLatestNational

*ಆತ್ಮಾಹುತಿ ಬಾಂಬರ್ ಗೆ ಆಶ್ರಯ ನೀಡಿದ್ದ ಆರೋಪಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ದೆಹಲಿಯ ಕೆಂಪುಕೋಟೆ ಬಳಿ ಆತ್ಮಾಹುತಿ ಕಾರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐಎ ಅಧಿಕಾರಿಗಳು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಆತ್ಮಾಹುತಿ ಕಾರ್ ಬಾಂಬರ್ ಉಗ್ರ ಡಾ.ಉಮರ್ ನಬಿಗೆ ಆಶ್ರಯ ನೀಡಿದ್ದ ಫರಿದಾಬಾದ್ ನಿವಾಸಿ ಶೋಯಬ್ ಎಂಬಾತನನ್ನು ಬಂಧಿಸಲಾಗ್ದೆ. ಬಂಧಿತ ಡಾ.ಉಮರ್ ನಬಿಗೆ ದೆಹಲಿಯಲ್ಲಿ ಕಾರು ಸ್ಫೋಟಿ ಸುವ ಮುನ್ನ ಆಶ್ರಯ ನೀಡಿದ್ದ ಎಂಬುದು ತನಿಖೆಯಲ್ಲಿ ಬಯಲಾಗಿದೆ.

ನವೆಂಬರ್ 10ರಂದು ಸಂಜೆ ದೆಹಲಿಯ ಕೆಂಪುಕೋಟೆಯ ಮೆಟ್ರೋ ಸ್ಟೇಷನ್ ಬಳಿ ಕಾರ್ ಬಾಂಬ್ ಸ್ಫೋಟಗೊಂಡು 15 ಜನರು ಸಾವನ್ನಪ್ಪಿದ್ದರು. ಹಲವು ಗಂಭೀರವಾಗಿ ಗಾಯಗೊಂಡಿದ್ದರು.

Home add -Advt

Related Articles

Back to top button