Kannada NewsKarnataka NewsLatest

ಪ್ರಫುಲ್ ಪಾಟೀಲ್, ಸಹಚರರ ಬಂಧನ

 ವಿವಿಧ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನಗರದಲ್ಲಿ ಕೊಲೆಗೆ ಯತ್ನ, ದೊಂಬಿ ಹಾಗೂ ಅಕ್ರಮ ಚಟುವಟಿಕೆ ಹೀಗೆ ನಗರದ ವಿವಿಧ ಠಾಣೆಗಳ ಒಟ್ಟು-೦೯ ಪ್ರಕರಣಗಳಲ್ಲಿ ಭಾಗಿಯಾಗಿದ್ದ, ಹಾಗೂ ಕೃತ್ಯವೆಸಗಿ ತಲೆಮರಿಸಿಕೊಳ್ಳುತ್ತಿದ್ದ ಆರೋಪಿ ಪ್ರಫುಲ್ ಪಾಟೀಲನನ್ನು ಖಡೇಬಜಾರ ಠಾಣೆಯ ಪೊಲೀಸ್‌ರು ಬಂಧಿಸಿದ್ದಾರೆ.
ಖಡೇಬಜಾರ ಠಾಣೆಯ ಎಸ್‌ಸಿಎಸ್‌ಟಿ ದೌರ್ಜನ್ಯ ಮತ್ತು ಕೊಲೆಗೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ  ಪ್ರಫುಲ್ ಬಾಲಕೃಷ್ಣ ಪಾಟೀಲ್ (೨೬) (ಸಾ|| ಚಾವಟ ಗಲ್ಲಿ) ಹಾಗೂ ಆತನೊಂದಿಗೆ ರೋಹಿತ ಕೃಷ್ಣಾ ರೆನಕೆ (೨೩) (ಸಮರ್ಥ ನಗರ), ಶೈಲೇಶ ಅಶೋಕ ಜಾನಗವಳಿ (೨೪) (ಸಾ|| ನಾನಾವಾಡಿ) ಇವರನ್ನು ಎಸಿಪಿ ಚಂದ್ರಪ್ಪ ಮೇಲ್ವಿಚಾರಣೆಯಲ್ಲಿ  ಧೀರಜ ಶಿಂಧೆ ಪಿಐ ಖಡೇಬಜಾರ ಠಾಣೆ ಹಾಗೂ ಅವರ ಸಿಬ್ಬಂದಿ ಬಂಧಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button