ಪ್ರಗತಿವಾಹಿನಿ ಸುದ್ದಿ; ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಪ್ರೊಗ್ರೆಸ್ಸೀವ್ ಹೈಸ್ಕೂಲ್ ನ ನಿವೃತ್ತ ಶಿಕ್ಷಕ ತಾಲೂಕಿನ ದೇವರಕೊಪ್ಪದ ಕೆ.ಎ.ಹೆಗಡೆ ಹೊನ್ನೆಭಾಗ (80) ವಿಧಿವಶರಾಗಿದ್ದಾರೆ.
ಕೆಲವು ತಿಂಗಳಿಂದ ಅನಾರೋಗ್ಯಕ್ಕೆ ಈಡಾಗಿದ್ದ ಕೆ.ಎ.ಹೆಗಡೆ, ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ, ಪುತ್ರಿ, ಅಪಾರ ಶಿಷ್ಯ ಸಮೂಹ ಅಗಲಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ