Kannada NewsKarnataka NewsLatest

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ  ಅಭಿವೃದ್ಧಿ ಯೋಜನೆಗಳ ಮೆರವಣಿಗೆ

ಮತ್ತೆ 3 ರಸ್ತೆ ಅಭಿವೃದ್ಧಿಗೆ ಸೋಮವಾರ ಚಾಲನೆ ನೀಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್   

 
ಬೆಳಗಾವಿ – ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಯೋಜನೆಗಳು ಸಾಲು ಸಾಲಾಗಿ ಮುಂದುವರಿದಿವೆ. ಇದಕ್ಕೆ ಇಂದು ಮತ್ತೆ 3 ರಸ್ತೆಗಳ ಅಭಿವೃದ್ಧಿ ಯೋಜನೆಗಳು ಸೇರ್ಪಡೆಗೊಂಡಿವೆ.
ಸೋಮವಾರ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಕ್ಷೇತ್ರ 3 ರಸ್ತೆಗಳ ಅಭಿವೃದ್ಧಿಗೆ ಪೂಜೆ ನೆರವೇರಿಸಿದರು. ಬಹು ವರ್ಷಗಳ ಬೇಡಿಕೆಗೆ ಸ್ಪಂದನೆ ಸಿಗುತ್ತಿರುವುದಕ್ಕೆ, ದಶಕಗಳ ನಂತರ ತಮ್ಮೂರು ಅಭಿವೃದ್ಧಿ ಕಾಣುತ್ತಿರುವುದಕ್ಕೆ ಜನರು ಹರ್ಷಗೊಂಡಿದ್ದಾರೆ.
 
75 ಲಕ್ಷ ರೂ. ವೆಚ್ಚ

  ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ಒಟ್ಟು 75 ಲಕ್ಷ ರೂ,ಗಳ ವೆಚ್ಚದಲ್ಲಿ ಮಾಸ್ತಮರ್ಡಿ ಗ್ರಾಮದಿಂದ ತಾರೀಹಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಡಾಂಬರೀಕರಣದ ಕಾಮಗಾರಿಗಳಿಗೆ ಲಕ್ಷ್ಮಿ ಹೆಬ್ಬಾಳಕರ್ ಅಧಿಕೃತವಾಗಿ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾವಕ್ಕ ನಾಯಕ, ಸದಸ್ಯರಾದ ಯಲ್ಲಪ್ಪ ಗ್ವೌಂಡಾಡಕರ, ನಾಮದೇವ ಜೋಗನ್ನವರ, ಗೀತಾ ತಳವಾರ, ಗೀತಾ ಮುಚ್ಚಂಡಿ, ಪ್ರಮೋದ್ ಜಾಧವ್, ಬಸವಂತ ಕುಂದರಗಿ, ರುದ್ರಪ್ಪ ತಾರೀಹಾಳ, ಬಸವರಾಜ ನಾಯ್ಕ, ಕಾಂಗ್ರೆಸ್ ಮುಖಂಡರಾದ ಸೂರ್ಯ ಜಿ ಜಾಧವ್, ರಾಜು ಜಾಧವ, ಯಲ್ಲಪ್ಪ ಥೋರಲಿ, ಬಾಳಪ್ಪ ಕುರಂಗಿ, ರಾಯಪ್ಪ ತವಗದ, ನಾಗಲಿಂಗ ಬಡಿಗೇರ, ಕಲ್ಮೆಶ ಪಾರ್ವತಿ, ಅಡಿವೆಪ್ಪ ರಾಗೀಪಾಟೀಲ, ಅನಿಲ ಪೂಜಾರಿ, ಶಿವನಪ್ಪ ಪಾಟೀಲ, ನಾಗಪ್ಪ ತಳವಾರ, ಕಿರಣ್ ರಾಗೀಪಾಟೀಲ, ಮಾರುತಿ ಜಂಗಳಿ ಮೊದಲಾದವರು ಉಪಸ್ಥಿತರಿದ್ದರು.
2.82 ಕೋಟಿ ರೂ. ವೆಚ್ಚ
  ಪ್ರಧಾನ ಮಂತ್ರಿ ಗ್ರಾಮ ಸಡಕ ಯೋಜನೆಯ ಅನುದಾನದಲ್ಲಿ ಒಟ್ಟು 2.82 ಕೋಟಿ ರೂ,ಗಳ ವೆಚ್ಚದಲ್ಲಿ ತಾರೀಹಾಳ ಗ್ರಾಮದಿಂದ ಹಿರೇಬಾಗೇವಾಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಡಾಂಬರೀಕರಣದ ಕಾಮಗಾರಿಗಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅಧಿಕೃತವಾಗಿ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಸ್ಥಳೀಯ ಜನ ಪ್ರತಿನಿಧಿಗಳು, ರಸ್ತೆಯ ಗುತ್ತಿಗೆದಾರರು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾವಕ್ಕ ನಾಯಕ, ಸದಸ್ಯರಾದ ಯಲ್ಲಪ್ಪ ಗ್ವೌಂಡಾಡಕರ, ನಾಮದೇವ ಜೋಗನ್ನವರ, ಗೀತಾ ತಳವಾರ, ಗೀತಾ ಮುಚ್ಚಂಡಿ, ಪ್ರಮೋದ್ ಜಾಧವ್, ಬಸವಂತ ಕುಂದರಗಿ, ರುದ್ರಪ್ಪ ತಾರೀಹಾಳ, ಬಸವರಾಜ ನಾಯ್ಕ, ಕಾಂಗ್ರೆಸ್ ಮುಖಂಡರಾದ ಸೂರ್ಯ ಜಿ ಜಾಧವ್, ರಾಜು ಜಾಧವ, ಯಲ್ಲಪ್ಪ ಥೋರಲಿ, ಬಾಳಪ್ಪ ಕುರಂಗಿ, ರಾಯಪ್ಪ ತವಗದ, ನಾಗಲಿಂಗ ಬಡಿಗೇರ, ಕಲ್ಮೆಶ ಪಾರ್ವತಿ, ಅಡಿವೆಪ್ಪ ರಾಗೀಪಾಟೀಲ, ಅನಿಲ ಪೂಜಾರಿ, ಶಿವನಪ್ಪ ಪಾಟೀಲ, ನಾಗಪ್ಪ ತಳವಾರ, ಕಿರಣ್ ರಾಗೀಪಾಟೀಲ, ಮಾರುತಿ ಜಂಗಳಿ, ಉಪಸ್ಥಿತರಿದ್ದರು.
 
45 ಲಕ್ಷ ರೂ. ವೆಚ್ಚ

ಗಣಿ ಮಾತ್ತು ಭೂವಿಜ್ಞಾನ ಇಲಾಖೆಯ ವತಿಯಿಂದ ಸುಮಾರು 45 ಲಕ್ಷ ರೂ,ಗಳ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ನಂ. 4 ರಿಂದ ಬಡೇಕೊಳ್ಳಿ ಮಠ್ (ಸಿದ್ದನಭಾವಿ) ವರೆಗೆ ಕಾಂಕ್ರೀಟ್ ರಸ್ತೆಯ ನಿರ್ಮಾಣದ ಕಾಮಗಾರಿಗಳಿಗೆ ಲಕ್ಷ್ಮಿ ಹೆಬ್ಬಾಳಕರ್ ಸೋಮವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಾಗಯ್ಯಜ್ಜ ಸ್ವಾಮಿಗಳು, ಸಿ ಸಿ ಪಾಟೀಲ ಅಣ್ಣ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸ್ವಾತಿ‌ ಇಟಗಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ನಾಜರಿನ್ ಕರಿದಾವಲ್, ಅಡಿವೇಶ ಇಟಗಿ, ಸಲೀಮ್ ಸತ್ತಿಗೇರಿ, ಶಿವಾನಂದ ತೋಟಗಿ, ಬಸನಗೌಡ ಪಾಟೀಲ, ಸಯ್ಯದ್ ಸನದಿ, ಪರ್ವೇಜ್ ದೇವಲಾಪುರ,  ಮಲ್ಲಪ್ಪ ಹುಲಿಕವಿ, ಗಂಗಪ್ಪ ಇಟಗಿ, ಬಿ. ಎನ್. ಪಾಟೀಲ, ಸಂಜು ದೇಸಾಯಿ, ಆನಂದ ಪಾಟೀಲ, ಜಗದೀಶ ಹೊರಗಿನಮನಿ, ಸ್ಮಿತಾ ಪಾಟೀಲ, ಗೌಡಪ್ಪ ಹಾದಿಮನಿ, ಅನಿಲ ಪಾಟೀಲ, ಮಹಾಂತೇಶ ಹಂಚಿನಮನಿ, ಮಹಾಂತೇಶ ಘೋಡಗೇರಿ, ನಿಂಗಪ್ಪ ತಳವಾರ, ಮನೋಹರ ದುರ್ಗಣ್ಣವರ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button